Total Pageviews

Wednesday, 24 December 2014

ಹುಣ್ಣಮೆ ನಿಶಬ್ಧ



 ಒಂದು ನಿಚ್ಚಳ ಸುರ‍್ಯೂದಯದ ಬೆಳಗ್ಗೆ ಸುರ‍್ಯನಂತೆ ಪ್ರಜ್ವಲಿಸುತ್ತ ಪ್ರತಿಷ್ಠಿತ ಸಂಟ್ ಡೇವಿಡ್ ಕಾಲೇಜು ಮೆಟ್ಟಿಲೇರಿ ಬರುತ್ತಿದ್ದ ಯುವಕನ ಕಣ್ಣಾಲ್ಲಿ ಸಾವಿರ ಸಾವಿರ ಕನಸುಗಳಿದ್ದವು , ನಿರೀಕ್ಷೆಯಿತ್ತು , ಸಾದಿಸಬೇಕು ಎಂಬ ಹಂಬಲವಿತ್ತು.. ಪ್ರಿನ್ಸಿಪಾಲರ ಕ್ಯಾಬಿನ್ ಗೆ ಹೋದವನೆ ಆಪ್ಲೀಕೆಷನ್ ಫಾರಂ ಅವರ ಕೈಗಿಟ್ಟ..
  "ಹೆಸರು?" ಕೇಳಿದರು ಪ್ರಿನ್ಸಿಪಾಲ್ .
"ಅಪ್ಪ ಏನಿಟ್ಟನೋ ಗೋತ್ತಿಲ್ಲ , ಅಮ್ಮ ಹಿಮಾಂಶು ಅಂತ ಕರಿತಾಳೆ, ಜಗತ್ತು ಅನಾಥ ಅಂತ ಗುರುತುಸುತ್ತದೆ" ಯಾವುದೇ ದುಗುಡವಿಲ್ಲದೆ , ಒಂದೇ ಉಸಿರಿನಲ್ಲಿ ಒಂದಿಷ್ಟು ಯೋಚಿಸದೆ ಉತ್ತರಿಸಿದ ಹಿಮಾಂಶು.
 ಕುಳಿತ ಕುರ್ಚಿಯಲ್ಲೆ ಅಸಹನೆಯಿಂದ ಹಂದಾಡಿದ್ದರು ಪ್ರಿನ್ಸಿಪಾಲ್.. ಹೆಸರು-ಹಿಮಾಂಶು , ಜಾತಿ-ಮನುಷ್ಯ , ಅಪ್ಪ-ಗೊತ್ತಿಲ್ಲ , ಅಮ್ಮ-ಕಾಮಟಿಪುರದ ಕಾವೇರಿ ( ನಿಜವಾದ ಹೆಸರು ಹೇಳಿದ್ದರೆ ಪ್ರಿನ್ಸಿಪಾಲ ಬೆಚ್ಚಿಬಿಳುತ್ತಿದ್ದರೆನೋ... ಆ ಹೆಸರಿಗೆ ಅಷ್ಟು ಇತಿಹಾಸವಿತ್ತು , ನೆನಪಿತ್ತು , ಮೋಸವಿತ್ತು ) , ಕೆಲಸ-ಸೂ*ಗರಿಕೆ, ಸ೦ಬಳ- it depends!!     ತನ್ನ ಇಡೀ ಜೀವನದಲ್ಲೆ ಅಂತಹದೊಂದು ಆಪ್ಲೀಕೆಷನ್ ಫಾರಂ ಕಂಡಿರದ  ಪ್ರಿನ್ಸಿಪಾಲ ಅವನನ್ನ ನೋಡುತ್ತ ಬೆವತಿದ್ದರು..
  "character certificate ಎಲ್ಲಿ??" ತೀರಸ್ಕರದ ಧನಿಯಲ್ಲಿ ಕೇಳಿದರು  ಪ್ರಿನ್ಸಿಪಾಲ್.
 "No, I don't need it" ಅಂದಿದ್ದ ಹಿಮಾಂಶು
 "ಅಂದರೆ??" ಪ್ರಿನ್ಸಿಪಾಲ್ ಕಣ್ಣಗಾಲಿಸಿ ಕೇಳಿದ್ದ
 "ನನ್ನ characterಗೆ ಬೇರೆಯವರಿಂದ certificate ತೋಗಬೇಕಾಗಿಲ್ಲ, I am not here to impress anyone , ನನ್ನ character ಏನೆ೦ದು ನನಗೆ ಗೊತ್ತು , ನನ್ನ ಮಾತಿನಿಂದ ನೀವು ಬೇಸರಗೊಂಡರೆ i am helpless" ಯಾವುದೇ ಅಂಜಿಕೆಯಿಲ್ಲದೆ , ದುಗುಡವಿಲ್ಲದೆ ಸತ್ಯವನ್ನ ನುಡಿದಿದ್ದ ಹಿಮಾಂಶುವಿನ ಕಣ್ಣಲ್ಲಿ ಭರವಸೆಯ , ಸಾಧಿಸುವ ಬೆಳಕು ಕಾಣಿಸಿತು.  ಅವನ ಮಾತನ್ನು ನಿಶಬ್ದದಿಂದಲೇ ಆಲಿಸಿದರು ಪ್ರಿನ್ಸಿಪಾಲ್ , ಎರಡು ನಿಮಿಷ ನೀರವ ಮೌನ.. ಅದೆನನಿಸಿತೋ ಪ್ರಿನ್ಸಿಪಾಲರಿಗೆ " you are admitted , ನೀನು ಫೀ ಕೂಡ ಕಟ್ಟಬೇಕಿಲ್ಲ, ನಾನು scholorship ನೀಡ್ತೇನೆ" ಎಂದಿದ್ದರು... ಏನೋ ದೊಡ್ಡ ಗೆಲುವು ಸಾಧಿಸುತ್ತಾನೆ ಅಂತ ಪ್ರಿನ್ಸಿಪಾಲ್ಗೆ ಅನಿಸಿತ್ತು.. ಏನದು ಗೊತ್ತಿಲ್ಲ? , ಯಾವಾಗ ಉತ್ತರವಿಲ್ಲ , ಅದರೆ ನಿಜಕ್ಕೂ ಈತ ನಮ್ಮೆಲರಿಗಿಂತ ಎತ್ತರಕ್ಕೆ ಬೆಳೆಯುತ್ತಾನೆ ಮತ್ತು ತನ್ನ ಜೀವನದಲ್ಲೂ ಪ್ರಮುಖ ಪಾತ್ರವಯಿಸುತಾನೆಂದು ಪ್ರಿನ್ಸಿಪಾಲ್ ಕೂಡ ಊಹಿಸಿರಲಿಲ್ಲ.. ಹೆಸರು " Alexander ರಾಜನಾಥ ಚಟರ್ಜಿ" ಹಿಂದೂ-ಕ್ರಿಶ್ಯನ್ ದಂಪತಿಗೆ ಜನಿಸಿದ ಪ್ರಿನ್ಸಿಪಾಲ್ ಎರಡು ಮನೆತನದ ಹೆಸರು ಇಟ್ಟುಕೊಂಡು ವಿಚಿತ್ರವೇನಿಸಿದ..
                                                                   
                                                             *     *     *     *     *     *

        ಕಾಲೇಜು ಪ್ರಾರಂಭವಾಗಿತ್ತು ಹಿಮಾಂಶು ಬೇರೆ ವಿದ್ಯಾರ್ಥಿಗಳೊಂದಿಗೆ ಬೇರೆಯುತ್ತಿರಲಿಲ್ಲ , ಆತ ಯಾರು , ಎಲ್ಲಿಂದ ಬರುತ್ತಾನೆ , ಅಪ್ಪ-ಅಮ್ಮ , ಊಂ, ಯಾರಿಗೂ ಏನು ತಿಳಿದಿರಲಿಲ್ಲ ... ಹಿಮಾಂಶು ಕಾಲೇಜುನವರಿಗೆ ನಿಗೂಡನಾಗಿದ್ದ , ಒಬ್ಬನೆ ಕುರುತ್ತಿದ್ದ , breakನಲ್ಲೂ ಏನು ತಿನ್ನದೆ ಯಾವುದೋ  ಕಾದಂಬರಿಯನ್ನು ಓದುತ್ತಿರುತ್ತೆದ್ದ , ಐದು ದಿನಗಳಿಗೊಂದು ಹೊಸ ಕಾದಂಬರಿ , ಅಷ್ಟು ಓದುತ್ತಿದ್ದ ಹಿಮಾಂಶು , ವಾಲಿಬಾಲ್ ನಲ್ಲಿ ಕಾಲೇಜಿಗೆ ಕ್ಯಾಪ್ಟನ್ ಆಗಿದ್ದ , ಕೊರ್ಟನೊಳಗೆ ಕಾಲಿಟ್ಟರೆ ಹಸಿದ ಹೆಬ್ಬುಲಿಯಂತೆ ಬಡಬಡನೆ ಆಡುತಿದ್ದ , ಎಲ್ಲರೊಂದಿಗೂ ಬೇರೆಯುತ್ತಿದ್ದ ಆತ ಕೊರ್ಟನಿಂದ ಹೊರ ಬಂದರೆ ಅದೆ ನೀರಾವ ಮೌನ ಮತ್ತು ನಿಗೂಡತೆ ಅವರಿಸಿಕೊಳ್ಲುತ್ತಿತ್ತು.. ಹಿಮಾಂಶು ಯಾಕೆ ಹೀಗೆ ಅಂತ ಎಲ್ಲರಿಗಿಂತ ಹೆಚ್ಚು ತಲೆಕೆಡಿಸಿಕೊಂಡವಳು ಶಾಲಿನಿ.. ದೊಡ್ಡ ಶ್ರೀಮಂತರ ಮಗಳು ಇಡೀ ಕಾಲೇಜಿಗೆ ಗಾಡಿ ತರುತಿದ್ದ ಹುಡುಗಿ ಅವಳೊಬ್ಬಳೆ , ಕಪ್ಪು kinetic honda...

    ಕೈನಿಯಲ್ಲಿ ಬರುತ್ತಿದ್ದರೆ ಒಂದೀಡಿ ಹುಡುಗರ ಗುಂಪು ಬೆರಗಾಗಿ ನೋಡುತ್ತ ನಿಂತಿರುತಿದ್ದರು , ಅದೆಷ್ಟು ಪ್ರಪೋಸಲ್ ಬಂದಿತ್ತು ಶಾಲಿನಿಗೆ , ಲೆಕ್ಕವೆಯಿಲ್ಲ ಅದನ್ನ ಆಗೆ ಲೆಕ್ಕವೆಯಿಲ್ಲದಂತೆ ತೀರಸ್ಕರಿಸಿದ್ದಳು, ಹುಡುಗರ ಬಗ್ಗೆ ಆಸಕ್ತಿಯಿಲದ ಶಾಲಿನಿಗೆ ಅವತ್ತು ಹಿಮಾಂಶು ಬಗ್ಗೆ ಚಿಂತಿಸಿದ್ಲು.. ಮೊದಲ ಬಾರಿಗೆ ಯಾವುದೋ ಹುಡುಗನ ಬಗ್ಗೆ ಅದರಲ್ಲೂ ನಿಗೂಢತೆಯನ್ನು ಮೈಗೂಡಿಸಿಕೊಂಡಿದವನ ಬಗ್ಗೆ ಚಿಂತಿಸುತ್ತಿದಿನಿ ಎಂದು ಶಾಲಿನಿ ತನ್ನೊಳಗೆ ತಾನೆ ನಕ್ಕಳು! , ಆಗ್ಗೆ ಒಂದು ದಿನ ತೀರ ಬೊರಿಂಗ್ ಆದ ಕ್ಲಾಸ್ ನಂತರ ಹಿಮಾಂಶು ಬಳಿ ಹೋಗಿ "Let's have a cup of coffee, ಹಿಮು!!" , ಅಂದಿದ್ಲು , ಹಿಮು ತನ್ನ ಮನಸ್ಸಿಗೆ ತಿಳಿಯದೆ ಬಂದ ಪಧವಾ? ಅಥವಾ ಇಷ್ಟು ದಿನ ಮನಸ್ಸಿನಲ್ಲಿ ಅಡಗಿದ ಪ್ರೀತಿಯ ಮಾತ? ಆರೆ ನಾನೇಕೆ ಹಿಮು ಎಂದೆ?. ಯೊಚಿಸುವುದಕ್ಕು ಸಮಯ ಕೊಡದೆ ಅವಳ ಆಹ್ವನಕ್ಕೆ ಉತ್ತರ ನೀಡಿದ್ದ ಹಿಮಾಂಶು..

      "can you mind your own business " ಎಷ್ಟು ಆಹಂಕಾರ ಎಂದುಕೊಂಡಿದ್ದಲು ಶಾಲಿನಿ,

       "Look ಹಿಮಾಂಶು , ನೀನು ಒಬೊಂಟಿಯಾಗಿ ಇರುತಿಯಾಲ್ಲ ಅಂತ ನಾನು ಕಾಫಿಗೆ ಕರೆದದ್ದು ,ನಿನ್ನನ್ನ ಮೆಚ್ಚಿಸಿಲಿಕ್ಲ ಅಥವಾ ನನ್ನ ಜೊತೆ ಕಾಫಿ ಕುಡಿಯಲು ಯಾರು ಇಲ್ಲವೆಂದಲ್ಲ , ನಾನು ಕರೆದರೆ ನೂರಾರು ಹುಡುಗರು ತಲೆಮೆಲೊತ್ತು ರಾಣಿತರ ಕಾಫಿ ಡೇ ಕರೆದುಕೊಂಡು ಹೋಗ್ತರೆ" ಬಸುಗುಡುತ್ತ ಹೇಳಿದಳು ಶಾಲಿನಿ , ಅವಳ ಕೆನ್ನೆ ಕೆಂಪಾಗಿತ್ತು , ಕಣ್ಣು ಕೆಂಡಾಕರುತಿತ್ತು. ಇದನ್ನು ಹೇಳಿದವಳೆ ಮುಖ ತಿರುಗಿಸಿ ಹೊರಟು ಹೊದಳು.. ಇದನ್ನು ಕೇಳಿಸಿಕೊಂಡಿದ್ದ ಹಿಮಾಂಶುವಿನ ಕಣ್ಣಲ್ಲಿ ಯಾವುದೇ ಅಪರಾಧ ಮನೋಭವ ಇರಲಿಲ್ಲ , ಏನು ನಡೆದಿಲ್ಲವೆನೋ ಎಂಬಂತೆ ವಾಲಿಬಾಲ್ practice ನಲ್ಲಿ ತೋಡಗಿದ , ಅವನ ಮನೆ, ಎಲ್ಲಿಂದ ಬರುತ್ತನೆ ಎಂಬೂದು ಅವನಷ್ಟೆ ನಿಗೂಡವಾಗಿತ್ತು , ನಡೆದು ಬರುತ್ತಿದ್ದ , ಕೀಲೊ ಮೀಟರ್ ಕೀಲೊ ಮೀಟರ್‍ ಲೆಕ್ಕಿಸದೆ ನಡೆದುಬರುತ್ತಿದ್ದ , ಕಾಲೇಜಿಗೆ ಒಂದು ದಿನವೂ ರಜೆ ಹಾಕದೆ ಬರುತ್ತಿದ್ದ , ಒಬ್ಬರನ್ನೂ ಮಾತಡಿಸಿರಲಿಲ್ಲ ಶಾಲಿನಿಯನ್ನು ಬಿಟ್ಟು  "can you mind your own business " ಅನ್ನೊ ಮಾತನ್ನು ಬಿಟ್ಟು , ಅವನ ನಿಗೂಡತೆಯ ಬಗ್ಗೆ ಆಸಕ್ತಿ ಬೆಳೆಯುತ್ತಲೆ ಇತ್ತು , ಒಮ್ಮೆ ಹಿಮಾಂಶು ಕಾಲೇಜಿಗೆ ಬರದಿರುವುದು ಎಲ್ಲರಿಗೂ ಅಚ್ಚರಿಯಾಗಿತ್ತು , ನಂತರ ಕಾಲ ಉರುಳಿದಂತೆ ತಿಂಗಳು ತಿಂಗಳು ಕಳೆದಂತೆ ಎಲ್ಲರು ಗಮನಿಸಿದ್ದು ಒಂದೇ!! ಹಿಮಾಂಶು ಪೂರ್ತಿ ಚಂದ್ರನ ದಿನ ಅಂದರೆ "ಹುಣ್ಣಿಮೆಯ ದಿನ" ಕಾಲೇಜಿಗೆ ಬರುತ್ತಿಲ್ಲವೆಂದು , ಹಿಮಾಂಶು ಮತ್ತಷ್ಟು ನಿಗೂಡನಾದ , ಯಾರು ಏನೇ ಮಾತಡಿದರೂ ಕಣ್ಣಲ್ಲೆ ಉತ್ತರ , semester examನಲ್ಲಿ first ಬಂದರು ಕೂಡ ಅತನ ಮುಖದಲ್ಲಿ ನಗುವಿರದನ್ನು ಕಂಡು ಸ್ವತಃ ಪ್ರಿನ್ಸಿಪಾಲ್ ಕೂಡ ಅಚ್ಚರಿಪಟ್ಟರು. ಹಿಮಾಂಶು ನಮ್ಮೆಲ್ಲರಿಗಿಂತಲೂ ವಿಚಿತ್ರ ಮತ್ತು ವಿಶಿಷ್ಟತೆಯುಳ್ಳ ಒಳ್ಳ ಹುಡುಗನೆಂದುಕೊಂಡಳು ಶಾಲಿನಿ , ತನ್ನ ಮನಸ್ಸು ಹಿಮಾಂಶುವಿನ ಕಡೆ ವಾಲುತ್ತಿರುವುದೂ ಶಾಲಿನಿ ಕೂಡ ಅರ್ಥಮಾಡಿಕೊಂಡಿರಲಿಲ್ಲ... ಮತ್ತೊಂದು ಅಚ್ಚರಿಯಂದರೆ state level championshipಗೆ ಹಿಮಾಂಶು ಬರದೆ ಇದ್ದದ್ದು!! ಅವತ್ತು ಕೂಡ "ಹುಣ್ಣಮೆ"!!!





      ಅವತ್ತು ಕೂಡ ಅಂತಹುದೇ ಒಂದು ಹುಣ್ಣಿಮೆಯ ದಿನ , ಇವತ್ತು ಹಿಮು ಬಂದಿರವಿಲ್ಲವೆಂದು ಶಾಲಿನಿಯ ಕಣ್ಣು ಹುಡುಗರ ಬೆಂಚಿನೆಡೆಗೆ ಹೋಗಿರಲಿಲ್ಲ...ಅವಳ ಪಕ್ಕದಲ್ಲಿದ್ದ ಪ್ರಾಥನ 'ಹಿಮಾಂಶು' ಬಂದಿದ್ದಾನೆಂದು ಉದ್ಗರಿಸಿದಳು..ಕ್ಲಾಸ್ ನಲ್ಲಿದ್ದ ಅಷ್ಟು ಜನರು ಹಿಮಾಂಶುನನ್ನು ದಿಟ್ಟಿಸಿ ನೋಡಿದರು , ಶಾಲಿನಿ ತಡೆಯಲಾಗದೆ "wow what a surprise, ಹಿಮು ಇವತ್ತು ನೀ ಬಂದಿದ್ಯಾ , ನಿನ್ನ ಹುಣ್ಣಿಮೆಯ ಕೆಲಸ ಮಾರೆತುಬಿಟ್ಯಾ"ವೆಂದು ವ್ಯಂಗ್ಯವಾಗಿ ಮಾತಾಡಿದ್ಳು... ಏನು ನಡೆದಿಲ್ಲ ಮತ್ತು ಯಾವುದೇ ಅಚ್ಚರಿಯಿಲ್ಲದೆ ಹಿಮಾಂಶು ಸಣ್ಣದೊಂದು ನಗೆ ಬೀರಿ ಸುಮ್ಮನಾಗಿದ್ದ
      ಹಿಮಾಂಶು ಪಕ್ಕದಲ್ಲಿ ಕುತ್ತಿದ್ದ ಚಿರಂತ್ "ಹಿಮಾಂಶು, ನೀನು ಎಲ್ಲಿರೋದು , ನೀನೇಕೆ ಇಷ್ಟು ನಿಗೂಡ , ಹುಣ್ಣಿಮೆ ದಿನ ಎಲ್ಲಿಗೆ ಹೊಗ್ತ್ಯ? ಯಾಕೋ ನಿನ್ನ ಮೇಲೆ ನನಗೆ ಅನುಮಾನ , ನೀನು ಏನೋ ಮಾಡ್ತಯಿದ್ಯ??!" ಎಂದು ಅನುಮಾನದಿಂದ ಕೇಳಿದ್ದ..   ಹಿಮಾಂಶು ಅವನನ್ನೆ ದಿಟ್ಟಿಸಿ ನೋಡಿದ, ಅವನ ಕಣ್ಣುಗಳಲ್ಲಿ ಏನೋ ಶಕ್ತಿಯಿದೆ ಎನಿಸಿದ ಚಿರಂತ್ ಗೆ ದಂಗುಬಡಿಸಿತ್ತು , ಭಯಗೊಂಡವನೆ ಅಲ್ಲಿಂದ ಎದ್ದುಹೋಗಿದ್ದ ಚಿರಂತ್ , ಆಗ ನಡೆಯುತ್ತಿದ್ದ ಕ್ಲಾಸ್ನಿಂದ ಅತ್ಯಂತ  ಭಯಗೊಂಡು ನಡುಗುತ್ತ ಹೋಡಿಹೋಗಿದ್ದ ಚಿರಂತ್ ರೋಡಿನಲ್ಲಿ ಯಾವುದೋ ಲಾರಿಗೆ ಸಿಕ್ಕು ಸತ್ತನೆಂಬ ಸುದ್ದಿ ಕಾಲೇಜಿನಲ್ಲಿ ಹರಿದಾಡಿತ್ತು..ಅವನ ಸಾವು ದಾರುಣವೇನಿಸಿದ್ದೆ ಇದಕ್ಕೆ..ತನ್ನ ಪಾಡಿಗೆ ಕಾಲೇಜು ರೋಡಿನ ಫುಟ್ ಬಾತ್ ಮೇಲೆ ಒಂದು ಸಿಗರೇಟ್ ಸೇದುತ್ತ ಏನೋ ಚಿಂತಿಸುತ್ತಿದ್ದ ಚಿರಂತ್ ಮೇಲೆ ಅತಿವೇಗವಾಗಿ ದನದ ಚರ್ಮವನ್ನು ಹೊತ್ತು ತರುತಿದ್ದ ಲಾರಿ ಬ್ರೇಕ್ ಫೇಲ್ ಆಗಿ ಯಾವುದೇ ಕಷ್ಟವಿಲ್ಲದೆ  ಚಕ್ರಗಳು ಅವನ ದೇಹದ ಮೇಲೆ ಅರಿದಿತ್ತು.. ರಕ್ತ ರೋಡಿನ ಇಕ್ಕೆಲಗಳಿಗು ಹರಿದಿತ್ತು , ಎದುರಿಗೆ ನಿಂತಿದ್ದ ಶಾಲಿನಿ ಗೆಳತಿ ಪ್ರಾರ್ಥನ ಮೇಲೆ ರಕ್ತ ಚಿಮ್ಮಿತ್ತು. ವಿಷಯ ತಿಳಿಯುತ್ತಿದಂತೆ ಕ್ಲಾಸಿನ ಅಷ್ಟು ಜನ ಓಡಿ ಬಂದಿದ್ದರು , ಹಿಮಾಂಶುವನ್ನ ಹೊರತುಪಡಿಸಿ... ಕಾರಣವಿಲ್ಲದೆ ಸತ್ತು ಹೋಗಿದ್ದ ಚಿರಂತ್. ಹಿಮಾಂಶು ಆ ಹುಣ್ಣಿಮೆಯ ದಿನ ಬಂದಿದ್ದಕ್ಕು ಒಂದು ಕಾರಣವಿತ್ತು!!!
                                                    * * *    * * *    * * *
     ಆಗ ತಾನೆ ಬಿದ್ದಿದ್ದ  ಅಲ್ಪ ಮಳೆ ಭಾನುವಾರದ ಸಂಜೆಯನ್ನು ಮತ್ತಷ್ಟು ತಂಪುಗೊಳಿಸಿತ್ತು , ಆ ನಿಚ್ಚಳ ಸಂಜೆಯನ್ನು enjoy ಮಾಡುತ್ತ ಹೋಗುತ್ತಿದ್ದ ಹಿಮಾಂಶು, ಶಾಲಿನಿಯ ಕಣ್ಣಗೆ ಬಿದ್ದಿದ್ದ..  ಬ್ಲೂ ಜಿಂನ್ಸ್ ಮೇಲೆ ಬಿಳಿ ಜುಬ್ಬ ಧರಿಸಿ , ಕ್ರಾಪ್ ತೆಗದ ತಲೆ , ಮುಗ್ಲ್ನಗೆ ಬಿರುತ್ತಿದ್ದ ತುಟಿಗಳು , ತಣ್ಣನೆಯಾ ಪ್ರಶಾಂತವಾದ ಕಣ್ಣಗಳು , ಇದೆ ಮೊದಲ ಬಾರಿಗೆ ಇಷ್ಟು ಸುಂದರವಾದ ಹಿಮಾಂಶುನನ್ನು ಮೊದಲ ಬಾರಿಗೆ ನೋಡಿದ್ದಳು ಶಾಲಿನಿ , ತಡೆಯಾಲಾಗದೆ ತನ್ನ ಕೈನಿಯನ್ನು ಹಿಮುವಿನ ಕಡೆ ತಿರುಗಿಸಿದಳು.
   ಶಾಲಿನಿ, ಹೇಳಿಮಾಡಿಸಿದ ದುಂಡನೆಯ ತಲೆಗೆ ಬಿಗಿಯಾಗಿ ಕಟ್ಟಿದ ತುರುಬು , ಅದರ ಹಿಂಬದಿಗೊಣದು ಚಿಟ್ಟೆಯಾ ಕ್ಲಿಪ್ , ಉತ್ತರಾಷಡದ ಮಳೆಯಂತೆ ಹೊಳೆಯುವ ವಜ್ರದ ಹರಳಿನ ಬೆಂಡೋಲೆ , ಅವಳ ಬಿಳಿ ಬಿಂದಿ, ಆ ನಗು ಹಿಮಾಂಶುನನ್ನು ಹೊಟ್ಟೆಕಿಚ್ಚಿಸುತ್ತಿತ್ತು..
  ಕೈನಿಯನ್ನು ನಿಲ್ಲಿಸಿದವಳೆ "hi" ಅಂದಿದ್ಲು.
 ಒಂದು ತೆಳುವಾದ ನಗೆ ಬೇರಿದ್ದ ಹಿಮಾಂಶು.
 "where are you going handsome " ಎಂದು ಕಿಲಕಿಲ ನಕ್ಕಿದ್ಲು.
 "ನಿನ್ನಷ್ಟು ಸುಂದರವಾಗೆನಿಲ್ಲ ನಾನು ,  i am just a normal man , ನೀನು ಸುಂದರಿ " ಎಂದಿದ್ದ ಅವನು  ಅವಳ ನಗುವನ್ನು ಕಣ್ತುಂಬ ತುಂಬಿಕೊಂಡ.
"ಹಿಮು , is that you talking   ನಿನಗೆ ಮಾತಡಕ್ಕೂಡ ಬರುತ್ತ " ಎಂದು ಅಚ್ಚರಿ ಪಟ್ಟಿದ್ದಳು ಶಾಲಿನಿ.
" ಅವತ್ತು ನಾನು ಹಾಗೆ ಮಾತಡಿರಬಾರದಿತ್ತು I'm sorry ಶಾಲಿನಿ " ಎಂದು ವಿನಂತಿಸಿಕೊಂಡ.
"chill ಹಿಮು ಅದ್ಯಾವುದನ್ನು ನಾನು ಮನಸ್ಸಿನಲ್ಲಿಟ್ಟುಕೊಂಡಿಲ್ಲ , at least ಇವತ್ತಾದರೂ ನಿನ್ನ ಜೊತೆ ಕಾಫಿ ಕುಡಿಬಹುದ?? " ಎಂದಳು .
"off course " ಎಂದವನೇ ಅಲ್ಲೆ ಪಕ್ಕದಲ್ಲಿದ್ದ ಕಾಫಿ ಡೇಗೆ ಕರೆದ್ಹೊದ..
"Thanks a lot Himu , its getting late I'll meet you tommorow " ಎಂದವಳೆ ತನ್ನ ಕೈನಿಯನ್ನು ಯಾವತ್ತು ಇಲ್ಲದ ಸಂತೋಷದಲ್ಲಿ ಓಡಿಸುತ ಹೋದಳು ಶಾಲಿನಿ , ಹಿಮುನನ್ನ ಮನಸ್ಸಿನಲ್ಲಿಟ್ಟುಕೊಂಡು.
                                                        *   *   *   *   *   *   *

      ಬೆಂಗಳೂರಿನಿಂದ ಭಬನೆಶ್ವರ ತಲುಪುತಿದ್ದ ಟ್ರೇನ್ ನಂ.೧೮೪೬೪ ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಇಂದಿನ ಆ ಪ್ರಶಾಂತತೆ ಇರಲಿಲ್ಲ , ಅಷ್ಟು busy ಹಾಗಿದ್ದ ಟ್ರೇನ್ ಕ್ರಮೇಣ ತನ್ನ ಪ್ರಯಣಿಕರು ಕಡಿಮೆಯಾಗುತ್ತಿರುವುದನ್ನು ನಿಶಬ್ಧದಿದಂದಲೆ ಗಮನಿಸಿತ್ತು , ಇದಕ್ಕಿಂತ ಹೆಚ್ಚು ತಲೆಕೆಡಿಸಿಕಂಡಿದ್ದು ಒಂದೀಡಿ ಪೋಲಿಸರ ದಂಡು.. ಬೆಂಗಳೂರು , ಅಂಧ್ರ ಮತ್ತು ರೈಲ್ವೆ ಪೋಲಿಸರು ... ಪ್ರಶಾಂತತೆ ಕೂಡಿದ್ದ ಪ್ರಶಾಂತಿ ಎಕ್ಸಪ್ರೇಸ್ ಬೆಂಗಳೂರು ಸಿಟಿ ಜಂಕ್ಷನ್ ಬಿಟ್ಟು ಕಂಟೋನ್ಮೇಟ್ , ಯಲಹಂಕ , ಗೌರಿಬಿದನೂರು ಡಾಟುತ್ತಿದಂತೆ ಕರ್ನಾಟಕ- ಅಂಧ್ರ ಗಾಡಿಯಾದ ಹಿಂದುಪುರದಲ್ಲಿ ಸಂಭವಿಸುತ್ತಿದ್ದ ಸಾವು ಮಧ್ಯವಯಸ್ಕ ಹೆಣ್ಣುಮಕ್ಕಳೆ ಸಾಯುತ್ತಿದ್ದದ್ದು ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿತ್ತು ಬೆಂಗಳೂರು ಪೋಲಿಸರಿಗೆ.... ಇದರೊಂದಿಗೆ ರೈಲು   ಕರ್ನಾಟಕ ಗಡಿ ದಾಟಿ ಸತ್ಯಸಾಯಿಬಾಬನ ಆಶ್ರಮ ಬಿಟ್ಟು ದಾರ್ಮವಾರಂ ಜಂಕ್ಷನ್  ತಲುಪಿ ಇನ್ನೆನು ಅನಂತಪುರ ಸಮೀಪಿಸಬೇಕು ಅನ್ನುವಷ್ಟರಲ್ಲೆ ಬಿಳುತ್ತಿತ್ತು ಮತ್ತೊಂದು ಹೆಣ , ೧೧೦kmನ ಹಿಂದುಪುರ ಮತ್ತು ೨೨೦kmನ  ದಾರ್ಮವಾರಂ  ಮತ್ತು ಅನಂತಪುರ ಜಂಕ್ಷನ್ ನಡುವೆ....

 ಪ್ರತಿ ಅದಿನೈದು ದಿನಕ್ಕೊಮ್ಮೆ ಸಂಭವಿಸುತ್ತಿದ್ದ ಈ ಸಾವು ಪೋಲಿಸ್ ಇಲಾಖೆಯ ಪ್ರಮುಖರನ್ನು ನಿದ್ದೆಗೆಡಿಸಿತ್ತು , ಎರಡು ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳ ತಂಡವನ್ನು ಕಟ್ಟಿ ಕಾರ್ಯಚರಣಕ್ಕೆ ಇಳಿಸಲಾಯಿತು.. ಹಿಂದುಪುರದ assistant commissioner vinciet ಅತ್ಯಂತ ಕ್ಲಷ್ಟವಾದ ಈ ಕೇಸ್ನ ನೇತೃತ್ವವಾಯಿಸಿದರು , ಬರ್ಬರ ಹತ್ಯಗಳ , ಸಾಲು ಸಾಲು ಕೊಲೆಗಳ ಜಾಡು ಇಡಿದು ಹೊರಟರು... ಅ ಎಲ್ಲಾ ಕೊಲೆಗಳು ಒಂದೇರೀತಿಯಾಗಿತ್ತು..ಕತ್ತನ್ನು ಕುಯ್ದು ಗಂಟಲ ಭಾಗವನ್ನು ಹೊತ್ತು ಹೊಯುತ್ತಿದ್ದರು ಹಂತಕರು... ವಿಚಾರಣೆ ಕೈಗೆತ್ತಿಕೊಂಡ ಕೇಲವೆ ದಿನದಲ್ಲಿ hint ಸಿಕಿದ್ದ ಖುಷಿಯಲ್ಲಿದ್ದ AC Vincient , commissioner  ಬಳಿ ಹೊದವರೆ..
 "sir ,  we got a hint , ಹಂತಕರು ಬೆಂಗಳೂರಿನವರೆ ಮತ್ತು ಬೆಂಗಳೂರಿನಲ್ಲಿ ಪ್ರಶಾಂತಿ ಎಕ್ಸಪ್ರಸ್ ಟ್ರೇನ್ ನಂ.೧೮೪೬೪ ಹತ್ತುತ್ತಿದ್ದವರೆ ಕೊಲೆಯಾಗುತ್ತಿದ್ದರು Sir, I need a full force ನಮ್ಮ ಮತ್ತು ಬೆಂಗಳೂರು ಪೋಲಿಸರು ಮಫ್ತಿಯಲ್ಲಿ  ಕಾರ್ಯಚರಣೆ ನಡೆಸಿದರೆ we can trap them " ಅಂತ ವರದಿನೀಟಿದ್ದ ...
 ಯಾವುದೇ ಮರು ಯೊಚನೆ ಇಲ್ಲದೆ "go ahead ಅಂದಿದ್ದರು " commissioner  ಎಂ , ಎನ್ , ಪ್ರಕಾಶ್ ನಾಯ್ಡು..
ಎಲ್ಲದಕ್ಕಿಂತ ಅತಿ ಪ್ರಮುಖವಾಗಿ  assistant commissioner viencient  ಗಮನಿಸಿದ್ದು....ಮದ್ಯವಯಸ್ಕ ಹೆಣ್ಣುಮಕ್ಕಳೆ ಹಂತಕರ ಟಾರ್ಗೆಟ್ ಅಗಿತ್ತು ಮತ್ತು ಈ ಸರಣಿ ಕೊಲೆ ನಡೆಯುತ್ತಿದೂ ಕೂಡ ಹುಣ್ಣಿಮೆಯ ದಿನದಂದೆ


        ಪುಟ್ಟ ಹಿಂಟ್ ದೊರೆತದ್ದೆ ತಡ ಹಿಂದುಪುರದ Assistant commisioner vincient ಬೆಂಗಳೂರು ಪೋಲಿಸರೊಂದಿಗೆ ದೊಡ್ಡ plan ಸಿದ್ದಪಡಿಸಿದ್ದರು "It was a very intellectual plan" ರಾತ್ರೊರಾತ್ರಿ ತಾತಲ್ಕಿಕ  CC cameraಗಳನ್ನು ರೈಲಿನ ಎಲ್ಲಾ  ಬೋಗಿಗು ಫಿಕ್ಸ್ ಮಾಡಲಾಗಿತ್ತು. ತಾವು ಪೋಲಿಸ್ ಎಂಬುದೇ ಗೊತ್ತಗದ ಮಟ್ಟಗೆ ವೇಶ ಮರಿಸಿಕೊಂಡರು , "Fully loaded English made CZ೭೫ SEMI AUTOMATIC PISTOL"ಗಳನ್ನ ಇಟ್ಟುಕೊಂಡಿದ್ದರು , ಒಂದು bullet, just one bullet ಹಂತಕನ ತಲೆಗೆ ಬಿದ್ದರೆ. ಅವನ ಮೆದುಲು ಟ್ರೇನ್ನ ಚವಣಿಗೆ ಕಚ್ಚಿಕೊಳ್ಳತ್ತಿತ್ತೆನೊ? ಅಷ್ಟು damage , mobility , acclereation ಇರೋ pistolನನ್ನು ಇಟ್ಟುಕೊಂಡಿದ್ದರು Assistant commisioner of Police Louis vincient , ಟ್ರೇನ್ನ ಅಷ್ಟು ಬೋಗಿಯಲ್ಲು ಮಫ್ತಿಯಲ್ಲಿದ್ದ ಪೋಲಿಸರು ಸುತ್ತುವರಿದಿದ್ದರು. ಕಳೆದ  ನಾಲ್ಕು ಹುಣ್ಣಮೆಗಳಿಂದ ನಡೆಯುತ್ತಿದ್ದ ಸಾಲು ಸಾಲು ಕೊಲೆಗಳು ಅವರನ್ನ ನಿದ್ದೆಗೆಡಿಸಿತ್ತು " It was reallu an INTELLECTUAL plan" ಹದ್ದಿನ ಕಣ್ಣಂತೆ ಟ್ರೇನ್ಗೆ ಹತ್ತುತಿದ್ದ ಪ್ರತಿ ಒಬ್ಬರನ್ನು ಗಮನಿಸುತ್ತಿದ್ದರು  , ಆಗ ಬೆಳಗ್ಗೆ ಆರು ಗಂಟೆ ಮುವತ್ತು ನಿಮಿಷ ಬೆಂಗಳೂರು-ಭಬನೆಶ್ವರ ಟ್ರೇನ್ ನಂ.೧೮೪೬೪ ಪ್ರಶಾಂತಿ ಎಕ್ಸಪ್ರೇಸ್ ನಿಧಾನವಾಗಿ ಸದ್ದು ಮಾಡುತ್ತ , ಕೂಗುತ್ತ ಚಲಿಸಲಾರಂಬಿಸಿತು.

    ಕರ್ನಾಟಕ -ಅಂಧ್ರದ ಜೀವನಾಡಿಯಾಗಿದ್ದ ಪ್ರಶಾಂತಿ ಎಕ್ಸಪ್ರೇಸ್ ಭರ್ತಿ ೬೦೦೦ ಪ್ರಯಾಣಿಕರರನ್ನು ಒತ್ತುಹೊಯ್ಯತ್ತಿತ್ತು , ಟ್ರೇನ್ ಯಲಹಂಕ , ಗೌರಿಬಿದನೂರು ದಾಟಿತ್ತು ಪೋಲಿಸರ ಕಣ್ಣಗಳು ಮೊನಚಗಿತ್ತು , ಬಲಿಗಾಗಿ ಕಾಯುತ್ತ ಬೆಚ್ಚನೆ  Assistant commisioner vincientನ ಕಾಲುಗಳ ಸಾಕ್ಸನಲ್ಲಿ ಅಡಗಿ ಕೂತ್ತಿತ್ತು English made CZ೭೫ SEMI AUTOMATIC PISTOL, ೯ಕಿಮೀ ಪೋಲಿಸರ ಎದೆಬಡಿತ ಹೆಚ್ಚಗುತ್ತಿತ್ತು , ಬೋಗಿಯಲ್ಲಿದ್ದ ಅಷ್ಟು ಜನರನ್ನು ದಿಟ್ಟಿಸಿ ನೋಡುತ್ತಿದ್ದರು.ಒಂದೇ ಸಮ ತಾವು ತಂದಿದ್ದ hidden mikeನಲ್ಲಿ ಆದೇಷ ಪಾಸ್ ಆಗುತ್ತಿತ್ತು .ಹಿಂದುಪುರ,   ಕರ್ನಾಟಕ -ಅಂಧ್ರದ ಗಡಿ ಪ್ರದೇಶವಾದ ಹಿಂದುಪುರ ಬಂದೆಬಿಟ್ಟಿತ್ತು . ಪೋಲಿಸರ ಕಣ್ಣುಗಳು ಏನ್ನನ್ನೊ ಹುಡುಕುತಿದೆ , ಪ್ರತಿಯೊಂದು ಜಾಗವನ್ನು ದಿಟ್ಟಿಸಿ ನೋಡುತ್ತಿತ್ತು , no, ಯಾವುದೇ ಕೊಲೆ ಈ ಬಾರಿ ನಡೆದಿರಲಿಲ್ಲ , they didn't give up- let us wait untill we reach Ananthpur ಅಂದಿದ್ದರು AC Vincient . They were waiting to catch the killers . No, they were dissappointed ಕೊಲೆಗಾರರು ಈ ಬಾರಿ ಇಲ್ಲಿಗೆ ಬಂದಿರಲಿಲ್ಲ.. ಬಂದಿರಲಿಲ್ವ??
     *   *   *

      ಕಾಮಟಿಪುರದ ಕಾವೇರಿ , ಬೆಳಕನ್ನು ಕಂಡು ಅದೆಷ್ಟು ದಿನಗಳಾಗಿದ್ದವು. ಅವಳ ಬದುಕಿದ್ದದ್ದೆ ಕತ್ತಲೆಯಲ್ಲಿ. ರಾತ್ರಿಯಾದ ಕೂಡಲೆ ಒಂದು ತೆಳ್ಳನೆಯ ಸೀರೆ ಹುಟ್ಟು. ಹೂವು ಮುಡಿದು ಹೊರಟಲೆಂದರೆ ಪುನಃ ಹಿಂತುರುಗುತ್ತಿದ್ದದ್ದೆ ಮರುದಿನ ಬೆಳಗ್ಗೆಯೇ. ಕಾವೇರಿ ಕಸುಬು ಎಷ್ಟು ಪ್ರಸಿದ್ದಿ ಪಡೆದಿತ್ತು ಎಂದರೆ ಅವಳಿಗೆ ಹೆಸರು ತಂದಿಟ್ಟಿದ ಮುಂಬೈನ ಕೇಂಪು ಲೋಕ ಕಾಮಟಿಪುರದ ಗಲ್ಲಿಗಲ್ಲಿಯಲ್ಲೂ  ಗೊತ್ತಿತ್ತು. ಕಾವೇರಿಯನ್ನು ಮುಂಬೈನಿಂದಲು ಜನ ಹುಡುಕಿಬರುತ್ತಿದರು . ಕಾವೇರಿ ಕತ್ತಲ ಲೋಕದ ಕಸುಬಿನಲ್ಲಿ ಮುಳುಗಿ ಹೋಗಿದ್ದಳು "ಹುಣ್ಣಮೆಯ ದಿನ : ಹೊರತುಪಡಿಸಿ . ಅಮ್ಮ ಯಾಕೆ ಹೀಗೆ , ಇದರಿಂದ ಹೊರಗೆ ಬಾ! ನಾನು ನಿನ್ನನ್ನು ನೋಡಿಕೊಳ್ಳುತ್ತೆನೆಂದು ಹೇಳಲು ಯೋಚಿಸಿದ್ದನಾದರು. ಅಮ್ಮನ ಬಗ್ಗೆ ಜಿಗುಪ್ಸೆ ಹುಟ್ಟಿಸಿತು ಹಿಮಾಂಶುವಿಗೆ . ಅಮ್ಮನ ಮೇಲಿದ್ದ ಕೋಪ , ಅಮ್ಮನ ಮೇಲಿದ್ದ ಜಿಗುಪ್ಸೆ , ತೀರಸ್ಕರ , ಇವನನ್ನು ಮೌನದಿಂದಲೆ ಬೆಳೆಯಲು ಹೆಡುಮಾಡಿತ್ತು , ಯಾರೊಂದಗೂ ಬೆರೆದಿರಲಿಲ್ಲ . ಯಾರ ಪ್ರೀತಿಯು ಸಿಕಿರಲಿಲ್ಲ. ಹಿಮಾಂಶು , ಅನಾಥ ಮಕ್ಕಳಿಗೂ ಹೀನವಾಗಿ ಬೆಳೆದಿದ್ದ  . ಅಮ್ಮನೊಂದಿಗೆ ಸಂತೋಷ , ನೋವು , ನಲಿವು , ಪ್ರೀತಿ , ಅನುಭವ ಯಾವುದನ್ನು ಅಂಚುಕೊಂಡಿರಲಿಲ್ಲ , ಎಷ್ಟೊ ಬಾರಿ ಸಾಯಲು ಪ್ರಯತ್ನಿಸಿದ್ದನಾದರು , "ಇಲ್ಲ , ಈ ಜಗತ್ತಿನಲ್ಲಿ ಎಲ್ಲಾ ನನ್ನನ್ನು ತಿರುಗಿನೊಡಬೇಕು , ಸಾದಿಸಬೇಕು" ಎಂದು ತನ್ನಲ್ಲೆ ತಾನೆ ಹೇಳಿಕೊಂಡಿದ್ದ ಹಿಮಾಂಶು...
     ಇತ್ತ ತಾಯಿ ತಾನೇಕೆ ಹೀಗೆ.. ಇದರ ಹಿಂದಿನ ಕಾರಣ ಏನೆಂಬುದು ಎಂದು ವಿವರಿಸಲು ಹೊದರು ಯಾರು ಕೇಳುತ್ತಿರಲಿಲ್ಲ , ನನ್ನ ನಿಜವಾದ ಹೆಸರು ಕಾವೇರಿಯಲ್ಲ , ಪ್ರಶಾಂತಿನಿ ಅಂತ ಸ್ವತಃ ತನ್ನ ಮಗ ಹಿಮಾಂಶುವಿಗೆ ಹೇಳೆದರು ಕೂಡ ನಂಬುತ್ತಿರಲಿಲ್ಲ. ಅವಳ ಜೀವನದಲ್ಲಿ ನಡೆದ ಆ ದೊಡ್ಡ ಮೋಸ, ಹಿಂಸೆ ಕಾಡುತ್ತಲೆ ಇತ್ತು , "ಎಷ್ಟು ಸುಂದರವಾಗಿತ್ತು ನನ್ನ ಬದಕು " ಅಂತ ತನ್ನೊಳಗೆ ತಾನೆ ಕೇಳಿಕೊಳ್ಳುತ್ತಿದ್ದಲು ಕಾವೇರಮ್ಮ
    ಸುಂದರವಾದ ಮತ್ತು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಪ್ರಶಾಂತಿನಿ ಲವ್ ಮಾಡಿ ಪ್ರೋಫೆಸರ್‍್ನನ್ನು ಮದುವೆಯಾಗಿದ್ದಳು . ಜೀವನದಲ್ಲಿ ತನಗಿದ್ದ ಎಲ್ಲಾ comfort ನೀಡಿದ್ದ ಪ್ರಶಾಂತಿನಿ ಗಂಡ  . ಬೆಂಗಳೂರಿನ ಜಯನಗರದಂತ ಜಯನಗರದಲ್ಲೊಂದು ಸ್ವಂತ ಮನೆ , ಇಬ್ಬರು ಮಕ್ಕಳು. ಹೀಗೆ ಶಾಂತ ಸಾಗರದಲ್ಲಿ ಸಾಗುತ್ತಿದ್ದ ದೋಣಿಗೆ ನಾವುಕ ಮಾರೆಯಾಗಿ ಹೋಗಿದ್ದ , ಸುಂದರವಾದ ಪ್ರಶಾಂತಿನಿಯನ್ನು ಬಿಟ್ಟು ಹೋಗಿದ್ದ ಪ್ರೋಫೆಸರ್ "‍ತನ್ನ ಬದುಕಿನ ಎಲ್ಲಾ ಬಾಗಿಲು ಮುಚ್ಚಿಕೊಂಡಗಲೇ ಅಲ್ವೇ ನಾನು ಈ ಕಸುಬಿಗೆ ಇಳಿದದ್ದು " ಎಂದು ತನ್ನೊಳಗೆ ತಾನೆ ಕೊರಗುತ್ತಿದ್ದಳು ಪ್ರಶಾಂತಿನಿ @ ಕಾವೇರಿ
   *   *   *
    Alaxander ರಾಜನಾಥ ಚಟರ್ಜಿ  , ಬೆಂಗಳೂರಿನ ಪ್ರತಿಷ್ಠತ ಕಾಲೇಜು ಪ್ರೀನ್ಸಿಪಾಲ್ ಗೆ ಇರಬೇಕಾದ ಸಂತೋಷ ಆಗಲಿ , comfort ಆಗಲಿ ಇರಲಿಲ್ಲ . ಒಬ್ಬಂಟಿ ಬದುಕಿನಲ್ಲಿ ಒಂದು ಹೆಣ್ಣು ಮಗುವನ್ನು ತಾಯಿಯ ಆಸರೆಯಿಲ್ಲದೆ ಬೆಳೆಸಿದ್ದರು , ಆಕೆಗೆ comfortಗಿಂತ luxuryಯನ್ನೆ ನೀಡಿದ್ದ , but what ಇರಬೇಕಾದ ನೆಮ್ಮದಿಯೆ ಇರಲಿಲ್ಲ ಆಕೆಗೆ , ಮಧ್ಯರಾತ್ರಿಯಲ್ಲಿ  ಕಿಟರೆನೆ ಚಿರುತ್ತಿದ್ದಳು , ಅಪ್ಪನಿದ್ದ ಬಳಿಗೆ ಓಡಿ ಬರುತ್ತಿದ್ದಳು ಸಿಂಧು...... ತಾನು ಚಿಕ್ಕ ವಯಸ್ಸಿನಲ್ಲೆ ಇದ್ದಾಗ ಅಮ್ಮನ ಬಿಟ್ಟು ಬಂದಿದ್ದ ಅಂತ ಗೊತ್ತಿತ್ತು. ಆದರೆ ಅಮ್ಮನ ಮಮತೆ , ಪ್ರೀತಿ ಕೊಟ್ಟು ಬೆಳೆಸಿದ್ದ ಚಿಕ್ಕಮ್ಮ ಇದ್ದಕ್ಕ್ಇದಂತೆ ತೀರಿಕೊಂಡಿದ್ದು ಆಕೆ ಮೇಲೆ ಗಾಢ ಪರಿಣಾಮ ಬೀರಿತ್ತು , ಯಾಕೋ ತನ್ನ ಸೀಮಿತ ಕಳೆದುಕೊಡಿದ್ದಳು ಸಿಂಧು
*  *  *

  ಅಂದು ಸ್ಯಾಂಕಿಯ ರಸ್ತೆಯಲ್ಲಿ ಅನಿರಿಕ್ಷಿತವಾಗಿ ಸಿಕ್ಕಿದ ಹಿಮಾಂಶು ಅಲ್ಲೆ MES ಕಾಲೇಜು ಬಳಿ ಇದ್ದ ಕಾಫಿ ಡೇ ಕರೆದೊಯ್ದು cappacio ಕುಡಿದ ನಂತರ ಶಾಲಿನಿಯ ಮನಸ್ಸೆಲ್ಲಿ ಹಿಮು ಅಂತ ಅಂತವಾಗಿ ಅವರಿಸಿಕೊಂಡಿದ್ದ .. ಎಂದು ತನ್ನ appreance ಬಗ್ಗೆ ಕಾಳಜಿವಯಸದ ಶಾಲಿನಿ ಆ ದಿನ ಮನಗೆ ಹೊದವಳೆ ತನ್ನ ಸೌಂದರ್ಯದ ಬಗ್ಗೆ ಯೋಚಿಸ ತೋಡಗಿದಲಳು.." Am I pretty enough to be a friend for my ಹಿಮು??" ಅಂತ ತನ್ನೊಳಗೆ ತಾನೆ ಕೇಳಿಕೊಂಡ ಶಾಲಿನಿಯ ಮುಖದಲ್ಲಿ ಸಣ್ಣದೊಂದು ನಗೆ ಆಕೆಯ ಕೆನ್ನೆಯನ್ನು ತಂಪುಮಾಡಿತ್ತು . ಈಗ ತಾನೇ ಹಚ್ಚಿದ್ದ ದೀಪದಂತೆ ಆಕೆಯ ಕಣ್ಣುಗಳು ಹೊಳೆಯುತದತಿದ್ದವು . ಯಾವುದೋ ಸಂತೋಷದಲ್ಲಿ ತನ್ನ bed ಮೇಲೆ ಅಂಗಾತ ಮಲಗಿ ಯೋಚಿಸತೊಡಗಿದಳು "ನಾನು ಹಿಮುನನ್ನು ಪ್ರೀತಿಸ ತೋಡಗಿದ್ದೆನ? Am I in love with him "   ಆಕೆಗೆ Clarity ಇರಲಿಲ್ಲ. confused stateನಲ್ಲಿದ್ದಳು ಜಗತ್ತಿನ ಎರಡನೇ ಅತೀ ಸುಂದರಿ ಶಾಲಿನಿ , ಯಾವುದೆ ದಾರಿ ಕಾಣದೆ ಹಿಮಾಂಶುವಿಗೆ ಬರೆಯತೊಡಗಿದಳು..

     ಪ್ರೀತಿಯ(?) ಹಿಮು ,
       ಈ ಪತ್ರ ನನ್ನ ಎದೆಯಲ್ಲಿ ಮೂಡಿನಿಂತು ದಿನಗಳೆ ಆಗಿದ್ದವು , I don't know whether I'm doing it right or not , ನೀನು ನನ್ನ ಜೊತೆಯಲ್ಲಿದಷ್ಟು ಹೊತ್ತು I feel comfort , ನಿನ್ನೊಂದಿಗೆ ನಡೆಯುವ ಪ್ರತಿ ಹೆಜ್ಜೆಯನ್ನು ನಾನು enjoy ಮಾಡಿದ್ದೆ , ನಿನ್ನ presence ನನ್ನ ಮನಸ್ಸಿಗೆ ಮುದ ನೀಡುತ್ತೆ.. ಬರೀ comfort , happy , sweetness , ಮುದ ನೀಡುವ ಅನುಭವ ಪ್ರೀತಿನ ಗೊತಿಲ್ಲ , ನೋ definately ಇದು ಲವ್ ಅಲ್ಲ , ಲವ್ ಇರಬಹುದ ಹಿಮು?? ನಿಜವಾಗಲೂ ಗೊತ್ತಿಲ್ಲ , but we are not just friends , we are more than  friends , ನಿನ್ನ ಉತ್ತರದ ನೀರಿಕ್ಷೆಯಲ್ಲಿ..
                                                                                           -ನಿನ್ನ ಶಾಲಿನಿ

   ಈ ರೀತಿ kanglishನಲ್ಲಿ ಪತ್ರ ಬರೆದು ಹಿಮಾಂಶುವಿಗೆ ನೀಡಿದ್ದಳು ಶಾಲಿನಿ , ಆತ ನೀಡಿದ್ದ ಉತ್ತರ ಶಾಲಿನಿಯನ್ನ ದಂಗುಬಡಿಸುವುದರೊಂದಿಗೆ ನೆಮ್ಮದಿನೀಡಿತ್ತು!!!??

 ಆಶ್ಚರ್ಯವಾಗಬಹುದು! ಸಹಸ್ರಾರು ಚದರಮೈಲಿ ವಿಸ್ತಾರದ ಕಾಡಿನ ನಟ್ಟನಡುವೆ ಯಾವುದೇ ದಾರಿಯಿಲ್ಲದ ಈ  ಸ್ಥಳದಲ್ಲಿ ಯಾರು ಈ ಅಧ್ಯಯನ ಕೇಂದ್ರವನ್ನು ಕಟ್ಟಿರಬಹುದೆಂದು??   ಹಿಂದೆ ತಿರುಗಿದರೆ ಭೊರ್ಗರೆಯಿತ್ತಿರುವ ಕೃಷ್ಣೆ ಮುಂದೆ ಕತ್ತಲಿಗು ಬೆಚ್ಚಿಬಿಳಿಸಿವ ಕಾಡು. ನಲ್ಲಮಲ ಅರಣ್ಯಪ್ರದೇಶ ತನ್ನ ಬೆರನ್ನ ಅಂಧ್ರದ ಉದ್ದಗಲಕ್ಕು ಚಾಚಿ ತಮಿಳುನಾಡು ತಲುಪಿತ್ತು , ಶ್ರೀಶೈಲಂ ಡ್ಯಾಮ್ನಲ್ಲಿ ಕೃಷ್ಣೆ ರೌದ್ರರಮಣೀಯವಾಗಿ ತನ್ನ ಶಕ್ತಿಯನ್ನು ತೋರಿಸುತ್ತಿದ್ದಳೆ , ದೂರದಲ್ಲೆಲ್ಲೊ ಹುಲಿಗಳ ಗರ್ಜನೆ ಆನೆಯ ಕೂಗು ಅವುಗಳಿಗೆ ಪೈಪೋಟಿ ನಿಡುವಂತೆ ಶಬ್ದಮಾಡುತ್ತ ಹರಿಯುತ್ತಿರುವ ಕೃಷ್ಣ ನದಿ , ಪ್ರಕೃತಿಯ ಸೋಬಗನ್ನು ಸಾರಿ ಸಾರಿ ಹೇಳುತ್ತಿತ್ತು . ನಲ್ಲಮಲ ಅರಣ್ಯದ ಆ ಭೀಕರ ಸೌಂದರ್ಯ ಕಂಡ ಬೆಂಗಲೂರಿನ ಸೆಂಟ್ ಡೇವಿಡ್ ಕಾಲೇಜಿನ ವಿದ್ಯಾರ್ಥಿಗಳ ಕಣ್ಣು ಆಶ್ಚರ್ಯಪಟ್ಟಿತ್ತು . ಪ್ರಕೃತಿಯ ಸೌಂದರ್ಯ , ಕಣ್ಣುಹಯಿಸಿದಷ್ಟು ದೂರ ಡಟ್ಟವಾಗಿ ಬೆಳದಿದ್ದ ದೊಡ್ಡ ದೊಡ್ಡ ಮರಗಳು , ಅದರೊಳಗೆ ಹಾಸುಹೊಕ್ಕಗಿದ್ದ ಪ್ರಾಣಗಳ ದಂಡು , ಕೃಷ್ಣನದಿಯ ಭೊರ್ಗರೆತ... ಇದರ ಸೌಂದರ್ಯ ಕಂಡು ಅವರ ಮನಸಲಿದ್ದ ಸಂತೋಷ , ಸಂಭ್ರಮ ಮತ್ತಷ್ಟು ಹೆಚ್ಚಿಸಿತು , ನಲ್ಲಮಲ ಹುಲಿ ಸಂರಕ್ಷಣ ಹಾಗೂ ಶ್ರೀಶೈಲಂ ಡ್ಯಾಮ್ನ Hydroelectric power station ಬಗ್ಗೆ ಅಧ್ಯಯನ ಮಾಡಲು ಬಂದಿದ್ದೆವೆ ಎನ್ನುವುದು ಮರೆತುಹೋಗುವಷ್ಟು ಸುಂದರವಾಗಿತ್ತು ಆ ನೋಟ...
    ಎಲ್ಲರೂ ಆ ಸೌಂದರ್ಯವನ್ನು ಒಂದು split secondನಷ್ಟು ಹೊತ್ತು ಮಿಸ್ ಮಾಡದೆ ನೋಡುತ್ತಿದ್ದರೆ ಇತ್ತ ಶಾಲಿನಿಗೇನೊ ತಳಮಳ . ಹಿಮಾಂಶು ತಾನು ನೀಡಿದ್ದ ಪತ್ರಕ್ಕೆ ಇನ್ನ ಉತ್ತರಿಸಿಲ್ಲವೆಂದು!!  ಪ್ರತಿ ನಿಮಿಷ , ಪ್ರತಿ ಕ್ಷಣ ಶಾಲಿನಿ ಅದರ ಬಗ್ಗೆಯೆ ಯೋಚಿಸುತ್ತಿದ್ದಳು . ಹಿಮಾಂಶು ಇದಾವುದರ ಬಗ್ಗೆಯು ಅರಿವಿಲ್ಲದೆ ಪೂ.ತೇಜಸ್ವಿಯ ಕಾಡಿನ Romantic thriller 'ಜುಗಾರಿ ಕ್ರಾಸ್ ' ಕಾದಂಬರಿಯನ್ನು ಓದುತ್ತ ಪ್ರತಿ ನಿಮಿಷವನ್ನು ಆ ಅರಣ್ಯದಲ್ಲಿ enjoy ಮಾಡ್ತಿದ್ದ...

                      *  *  *

      ACP ಲೂಹಿಸ್ ವಿನ್ಸೆಂಟ್ ತನ್ನ ಇಡೀ ಜೀವಮಾನದ ದೊಡ್ಡ ಮೀಷನ್ ಆಗಿದ್ದ ರೈಲ್ವೆ ಹಂತಕನ ಸೇರೆಯಲ್ಲಿ ವಿಫಲವಾಗಿದ್ದರು . ಮಾಧ್ಯಮಗಳಲ್ಲಿ ಸಾಲು ಸಾಲು ವರದಿಗಳು ಬರುತ್ತಾ ಇದ್ದವು .   ವಿನ್ಸೆಂಟ್ನ ಕಾರ್ಯಶಮತೆಯ ಬಗ್ಗೆಯು ಪ್ರಶ್ನಿಸತೋಡಗಿದವು , ಅಂಧ್ರದ ಪೋಲಿಸ್ ಕಾಮಿಷ್ನರ್‍್ತಲೆಯತ್ತಿ ಮಾತನಾಡದಂತಾಯ್ತು . ಇತ್ತ ಬೆಂಗಳೂರಿನಲ್ಲಿ ಒತ್ತಡ ಹೆಚ್ಚುತ್ತಿತ್ತು... ಇದಕ್ಕೆ ಪುಷ್ಟಿನೀಡುವಂತೆ ಅಂದು ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಕಾರ್ಯಚರಣೆ ನಡೆಸಿದ ದಿನ ಧರ್ಮವರಂ-ಅನಂತಪುರ ಜಂಕ್ಷನ್ ಅದರೂ ಕೊಲೆಯಾಗದನ್ನು ಕಂಡು , ಕೊಲೆಗಾರ ಸಿಕ್ಕಿಲದ ಕಂಡು ಪೋಲಿಸರು ಕಾರ್ಯಚರಣೆ ಸ್ಥಗಿತಗೊಳಿಸಿದರು ಆದರೆ ಅಲ್ಲಿ ಅವರ ಊಹೆಗೆ ನಿಲುಕದ ಘಟನೆ ನಡೆದಿತ್ತು . ಅನಂತಪುರ ಕೇಂದ್ರ ರೈಲ್ವೆ ಸ್ಟೆಷನಿಂದ ನಿದಾನವಾಗಿ ಹೊರಡುತ್ತಿದ್ದ    ಪ್ರಶಾಂತಿ ಎಕ್ಸಪ್ರೇಸ್ನಲ್ಲಿ  ಯಾರಿಗೂ ತಿಳಿಯದೆ ಕೊಲೆನಡೆದು ಹೋಗಿತ್ತು . ಆ ಕೊಲೆಯಲ್ಲಿದದ್ದು ಕೂಡ ಅದೇ ಭೀಕರತೆಯಲ್ಲಿ ಕರ್ನೂಲ್ ಜಿಲ್ಲೆಯ ಮಧ್ಯ ವಯಸ್ಸಿನ ಹೆಣ್ಣುಮಗಳ ಗಂಟಲನ್ನು ಕುಯ್ದು ಹೊತ್ತುಹೋಗಿದ್ದರು ಹಂತಕರು . ರಕ್ತ ಅ ಬೋಗಿಯಲ್ಲಿ ನೀರು ಹರಿದಂತೆ ಹರಿದಿತ್ತು .  ಪ್ರಶಾಂತಿ ಎಕ್ಸಪ್ರೇಸ್ನ ೧೬ನೇ ಬೋಗಿ ಸ್ತಬ್ದವಾಗಿತ್ತು , ಅ ಹುಣ್ಣಿಮೆಯ ರಾತ್ರಿಯಲ್ಲಿ ಅನಂತಪುರದಿಂದ ೪೦ ಕೀಲೊ ದೂರದಲ್ಲಿ  ಪ್ರಶಾಂತಿ ಎಕ್ಸಪ್ರೇಸ್ ನಿಶಬ್ದವಾಗಿತ್ತು . ಅಂದು  ಪ್ರಶಾಂತಿ ಎಕ್ಸಪ್ರೇಸ್ ೧೫ನೇ ಹತ್ಯೆಕಂಡಿತ್ತು . ಒಂದಿಡಿ ರೈಲ್ವೆ ಸಿಬಂದಿ ಬೆಚ್ಚಿಬಿದ್ದರು ! ಪತ್ರಿಕೆಗಳಲ್ಲಿ ೩-೪ ಪುಟ ಈ ಸರಣಿ ಹತ್ಯಗಳ ವರದಿ ಇರುತ್ತಿತ್ತು . ಹಿರಿಯ ಪರ್ತಕರ್ತರು ಸಂಪಾದಕೀಯ ಬರೆದರು . ಗಂಟೆಗಟ್ಟಲೆ ಟಿವಿಗಳಲ್ಲಿ , ರಸ್ತೆಯಲ್ಲಿ , ಸರ್ಕಾರಿ ಕಚೇರಿಯಲ್ಲಿ ಚರ್ಚೆ ನಡೆಯಿತ್ತು...  ಕರ್ನಾಟಕ-ಅಂಧ್ರ ವಿಧಾನಸಭೆಗಳಲ್ಲಿ ಅಲ್ಲೊಲ-ಕಲ್ಲೊಲ . ಪರೆದ್ತಿಯ ಭೀಕರತೆ ಮರೆತು ಅಡಲಿತ ರೂಡ ಪಕ್ಷಕ್ಕೆ ಹೀಯಳಿಸುತ್ತಿತ್ತು ಪ್ರತಿಪಕ್ಷಗಳು!!
    ಸಾಲು ಸಾಲು ಕೊಲೆಗಳು ಭೀಕರತೆ , ಕೇಸಿನ ಗಾಂಬಿರ‍್ಯವರೆತ ಎರೆಡು ರಾಜ್ಯದ ಮುಖ್ಯಮಂತ್ರಿಗಳು ಒಟ್ಟಾಗಿ , ಒಮ್ಮತವಾಗಿ ಒಂದು ನಿರ್ಧಾರ ಕೈಗೊಂಡರು , ಅದೇ special task forceನ ರಚನೆ ....."Operation Railroad Killer "  ಜಂಟಿಯಾಗಿ  ಪ್ರಾರಂಭವಾಗೇ ಬಿಟ್ಟಿತ್ತು..
   ಕರ್ನಾಟಕ-ಅಂಧ್ರದ ಪ್ರಮುಖ ಹಿರಿಯ ಪೋಲಿಸ್ ಅಧಿಕಾರಿಗಳು ಒಂದಾಗಿ Special Task Forceನ ರಚನೆಯಾಯಿತು... ಇದರ ನೇತೃತ್ವ ವಯಿಸಿದ್ದು.... ಹೆಸರು ಕೇಳಿದರೆ ಭೂಗತ ಲೋಕವೆ ನಡುಗುವ ಹಾಗೆ ಮಾಡುತ್ತಿದ್ದ ಕರ್ನಾಟಕದ Daring ಅಧಿಕಾರಿ tiger ಪ್ರತಪ್... ೧೬ ಜನರಿದ್ದ ಹಿರಿಯ ಪೋಲಿಸ್ ತಂಡ , ಜೊತೆಗೆ ೧೨ ACP , ೧೦ DCP , ೪೫ SI , ೧೫೦ PCಗಳು.. "Operation Rail Road Killer " ಕಾರ್ಯಚರಣೆಗೆ ಇಳಿದಿತ್ತು ದೊಡ್ಡ ಪೋಲಿಸ್ ತಂಡ.
                 *  *  *

       ಶಾಲಿನಿ ,
            ನನ್ನ ಜೀವನದಲ್ಲಿ ಅತೀ ಸಂತೋಷದದಿಂದ ಮಾತನಾಡಿಸಿದ ಹುಡುಗಿಯಂದರೆ ಅದು ನೀನೆ . ಎಲ್ಲ ನನ್ನನ್ನ ಹೊರಗಿನವನು , ನಿಗೂಢವಾಗಿ ಏನೋ ಮಾಡುತ್ತಿದ್ದನೆ ಎಂದು ದೂರ ತಳ್ಳಿದರು . ಅದರೆ ನೀನು ನನ್ನನ್ನ ಅಚ್ಚಿಕೊಂಡೆ , ಕಾಫಿ ಕುಡಿಸಿದೆ , ನನ್ನ ಜೊತೆಯಿದ್ದ ಆ ಕ್ಷಣ ನಿನ್ನ ಕಣ್ಣಗಳಲಿದ್ದ ಗೆಲುವುಕಂಡಿದ್ದೆ .. ಸ್ಯಾಂಕಿ ರೋಡ್ನಲ್ಲಿ ನಡೆದು ಹೋಗಿತ್ತಿರುವಾಗ ನಿನ್ನ ಆ ಕಿರುನಗೆ ಪ್ರೀತಿಬಿರಿದ್ದನ್ನು ಗಮನಿಸಿದ್ದೆ... I'm greatfull to you , ಅದರೆ ಶಾಲಿನಿ ನನ್ನ ಬಗ್ಗೆ ನೀನು ತಿಳಿದುಕೊಂಡಿಲ್ಲ ಅನಿಸುತ್ತೆ , I'm not a nice man to know.. ನಾನು ತುಂಬಾ ಮನುಷ್ಯನಲ್ಲ...ನಾನು ದೊಡ್ಡ ಕನಸನ್ನ ಹೊತ್ತಿದ್ದೆನೆ , ಸಾಧಿಸುವುದು ಬಹಳಷ್ಟಿವೆ..
   What do you know about me , ನನ್ನ ಬಗ್ಗೆ ಏನು ಗೊತ್ತು..ನನ್ನ ಕುಟುಂಬವೇ ವಿಚಿತ್ರ , ನಿನ್ನಂತ ಶ್ರೀಮಂತರ ಮಗಳು ಈ ಬೀಕರಿಯನ್ನು ಪ್ರೀತಿಸುವುದೆ , NO ಸಮಾಜ ಒಪಲ್ಲ.. ಸಮಾಜ ಏಕೆ ನಾನೇ ಒಪ್ಪುವುದಿಲ್ಲ..
              ಕ್ಷಮೆ ಇರಲಿ,                                  
                                                                                                    
                                                                                                                 - ನಿನ್ನ ಹಿಮು

   ಯಾವುದೆ ಎರಡನೇ ಯೋಚನೆ ಇಲ್ಲದೆ ಕೇವಲ ೩೦ secondನಲ್ಲಿ ಪತ್ರ ಬರೆದು ಮುಗಿಸಿ ಎರಡನೇ ಬಾರಿಯು ಹೋದದೆ ಸ್ವತಃ ಶಾಲಿನಿಗೆ ಕೊಟ್ಟುಬಂದಿದ್ದ ಹಿಮಾಂಶುವಿನ ಮನಸ್ಸಿನಲ್ಲಿ ಒಂದು ಚಿಂತೆ. "ನಿನ್ನ ಹಿಮು" ಅಂತ ನನಗೆ ತಿಳಿಯದೆ ಬರೆದುಬಿಟ್ಟೆನಲ್ಲ! , ಆ ಪದ ಮನಸ್ಸಿನಿಂದ ನೆರವಾಗಿ ಅಕ್ಷರ ರೂಪದಲ್ಲಿ ಪೇಪರ್‍್ಮೇಲೆ ಇಳಿದಿತ್ತು . ಹಿಮಾಂಶು ಮತ್ತಷ್ಟು ಯೋಚಿಸ ತೊಡಗಿದ . ಶಾಲಿನಿಯ ಆ ನಗು , ಅವಳ ಮುಂಗುರುಳು ಈಗ ತಾನೆ ಹಚ್ಚಿದ ದೀಪದಂತೆ ಕನುತ್ತಿದ್ದ ಕಣ್ಣುಗಳು ಹಿಮಾಂಶುವನ್ನು ಕಾಡತೋಡಗಿದವು , ಒಂದು ಕ್ಷಣ ತಾನೆ ಏನು ಮಾಡುತ್ತಿದೆನೆಂದು ಅರಿವು ಕೂಡ ಬಂದಿರಲಿಲ್ಲ ಶಾಲಿನಿಯ ಹಿಮುವುಗೆ!!
                                             *   *   *  *

       ಅತ್ತ ಬೆಂಗಳೂರಿನಿಂದ ಭಬನೆಶ್ವರಕ್ಕೆ ತಲುಪುತ್ತಿದ್ದ ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಕಾರ್ಯಚರಣೆ ತಿರ್ವಗೊಂಡಿತ್ತು..   ಕರ್ನಾಟಕ-ಅಂಧ್ರದ ಅಷ್ಟು ರೈಲ್ವೆ ರೂಟುಗಳಲ್ಲು ಭೀಗಿ ಬಂದೊಬಸ್ತ್. ಅಷ್ಟು ಗಿಜಿಗುಡುತ್ತಿದ್ದ  ಪ್ರಶಾಂತಿ ಎಕ್ಸಪ್ರೇಸ್ನಲ್ಲಿ  ಪೋಲಿಸ್ ಬೂಟುಗಳ ಶಬ್ದ ಹೊರತುಪಡಿಸಿದರೆ ನೀರವ ಮೌನ . ನಿಶ್ದವಲ್ಲಿ ಜೀವ ಪಡೆದಿತ್ತು . special task forceನ Operation Rail Road Killer ಕಾರ್ಯಚರಣೆ ಶುರುವಾದಗಲಿಂದ ಯಾವುದೆ ಹತ್ಯೆಯಾಗಿರಲಿಲ್ಲ , ಇತ್ತ Investigation ಟೀಮ್ ಮೈಕೊಡವಿ  ನಿಂತಿತ್ತು . ಕಳೆದ ನಾಲ್ಕು ತಿಂಗಳಿಂದ record ಆದ CC  cameraಗಳ ದೃಶ್ಯ , mobile phone network ಮತ್ತು ಟ್ರೇನ್ನಲ್ಲಿ ಸಿಕ್ಕಿದ್ದ ಕೆಲವು ದೃಶ್ಯಗಳ ಬಗ್ಗೆ ವಿಸ್ತೃತವಾದ ಅಧ್ಯಯನ ಮಾಡ ತೊಡಗಿತ್ತು . Especially ಹುನ್ನಿಮೆಯ ಹಿಂದು ಮುಂದು  ಮೂರು ದಿನಗಳ ದೃಶ್ಯ ಮತ್ತು ಟೀಕೆಟ್ ಗಳ details ಪ್ರತಿಯೊಂದನ್ನು ಕಲೆಯಾಕಲಾಗಿತ್ತು ಹತ್ತು ದಿನಗಳ ನಂತರ investigation team ವರದಿಯನ್ನು tiger ಪ್ರತಪ್ ಗೆ ನೀಡಲಾಗಿತ್ತು . They had a first susscess in this operation... they got a hint.. the big hint ...ಹಂತಕರ ಬಗ್ಗೆ ಸಕ್ಷಿಗಳ ಜೊತೆ ಕೆಲವು ದೃಶ್ಯಗಳು ಸಿಕ್ಕಿಬಿಡ್ತು. ಹುಣ್ಣಿಮೆಯ ಕೊಲೆಗಳ ರಹಸ್ಯ ಭೇದಿಸಲು ಅಣಿಯಾದರು STF ತಂಡ!!


          ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ನಡೆಯುತ್ತಿದ್ದ ಸರಣಿ ಕೊಲೆಗಳ ರಹಸ್ಯ ಭೇದಿಸಲು ಸ್ಥಾಪಿಸಿದ special task force ಕೇವಲ ಹತ್ತು ದಿನಗಳಲ್ಲೆ ಮೊದಲ ಯಶಸ್ಸು ಪಡೆದಿತ್ತು , ಹುಣ್ಣಮೆಯ ದಿನದಂದು ನಡೆಯುತ್ತಿದ್ದ ಕೊಲೆಗಳಿಗೆ ಸಂಭದಿಸಿದಂತೆ ನಾಲ್ಕರು ಸಕ್ಷಿ ಸಿಕ್ಕಿತ್ತು.. ಅದಕ್ಕಿಂತ್ತ ಹೆಚ್ಚಾಗಿ ಅವರಿಗೆ ಸಿಸಿಟಿವಿ ದೃಶ್ಯವಳಿಗಳು ಸಿಕ್ಕಿತ್ತು! ಕೂಡಲೇ ಮುಖ್ಯಮಂತ್ರಿ , ಗೃಹಸಚಿವ ಮತ್ತು DGPಗೆ ವರದಿ ಒಪ್ಪಿಸಿ 'operation railroad killer' ಕಾರ್ಯಚರಣೆ ಆರಂಭಿಸಿದರು ಟೈಗರ್‍  ಪ್ರತಾಪ್‌ಕುಮಾರ್‍್ನೇತೃತ್ವದ STF ತಂಡ..
                                                           *  *  *

  ಹಿಮಾಂಶು ಕೊಟ್ಟಿದ್ದ ಪತ್ರವನ್ನು ಮೂರು ನಿಮಿಷದಲ್ಲಿ ಹತ್ತು ಬಾರಿ ಓದಿಕೊಂಡಿದ್ದಳು , ಆ ಪತ್ರದಲ್ಲಿ ಬರೆದ ಪ್ರತಿ ಪದಗಳಿಂದೆ ಅಡಗಿದ್ದ ಭಾವ ಅರಿತಿದ್ದಳು ಶಾಲಿನಿ , ಆಗ ರಾತ್ರಿ ೧೦:೪೫ ನಿಮಿಷ ಆ ನಿರ್ಜನ ನಲ್ಲಮಲ ಅರಣ್ಯ ಪ್ರದೇಶದ ನಡುವೆ ಇದ್ದ ಅಧ್ಯಯನ ಕೇಂದ್ರಲ್ಲಿದ್ದದ್ದು ೧೩ ಮಂದಿ ಮಾತ್ರ . ಆ ಭಯಂಕರ ಕತ್ತಲ ರಾತ್ರಿಯಲ್ಲಿ ಹಿಮಾಂಶು ರೂಮಿಗೆ ನಡೆದು ಹೋದವಳೆ ಬಾಗಿಲು ತಟ್ಟಿದ್ದಳು . ಜಗತ್ತಿನ ಅರಿವಿಲ್ಲದ ಹಾಗೆ ಗೋಪಲ ಕೃಷ್ಣ ಅಡಿಗರ ಕವಿತೆ ಓದಿ ಕುಳಿತ್ತಿದ್ದ ಹಿಮಾಂಶು...
            " ಒಡೆದು ಬಿದ್ದ ಕೊಳಲು ನಾನು
         ನಾದ ಬರದು ನನ್ನಲ್ಲಿ!!"
                                                                                                ಎರಡು ಸಾಲಿನಲ್ಲಿ ಅದೆಷ್ಟು ಅರ್ಥ!!
ಬಾಗಿಲು ತಟ್ಟಿದ ಶಬ್ದ ಕೇಳಿದವನೆ ಪುನಃ ವಾಸ್ತವ ಜಗತ್ತಿಗೆ ಇಳಿದ , ಶಾಲಿನಿ ಬಾಗಿಲಲ್ಲಿ ನಿಂತದ್ದು ನೋಡಿ ಸಂತೋಷದೊಡನೆ ಅಚ್ಚರಿಪಟ್ಟ ಹಿಮಾಂಶು !!!
  " Himu , Shall we go for a walk " ಅಂದಿದ್ದ ಶಾಲಿನಿಯ ಕಣ್ಣುಗಳಲ್ಲಿ ವಿನಂತಿಯಿತ್ತು.
ತಲೆಯಾಡಿಸಿದವನೆ ಅ ನೀರವ ರಾತ್ರಿಯಲ್ಲಿ ಮುದ್ದು ಮುದ್ದು ಹುಡಿಗಿ ಶಾಲಿನಿಯೊಂದಿಗೆ ಹೆಜ್ಜೆ ಇಡುತ್ತ ಹೊರಟ ಹಿಮಾಂಶು.. ೧೦ ನಿಮಿಷ ಯಾವುದೇ ಮಾತಿಲ್ಲದೆ ನಡೆಯುತ್ತಾ ಹೋಗುತ್ತಿದವರಲ್ಲಿ ಶಾಲಿನಿಯು ಹಾಡಿದ ಹಾಡು ಮೌನ ಮುರಿದಿತ್ತು..  "ಓಲವೇ ಜೀವನ ಸಾ‍ಷತ್‌ಕಾರ , ಓಲವೇ ಮರೆಯಾದ ಮಮಾಕರ "
ಶಾಲಿನಿಯೊಂದಿಗೆ ನಲ್ಲಮಲ ಅರಣ್ಯದಲ್ಲಿ ರಾತ್ರಿ ೧೧.೦೦ ಗಂಟೆಗೆ ಆ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನನ್ನು ಹುಡುಕುತ್ತಾ ಹೋಗುತ್ತಿದ್ದ ಹಿಮಾಂಶುವಿಗೆ ಈ ಹಾಡು ೧೪ ವರ್ಷಗಳ ಹಿಂದಕ್ಕೆ ಕರೆದೊಯ್ತು !! ಅದು ಇಂತಹುದೆ ಒಂದು ಹುಣ್ಣಿಮೆಯ ರಾತ್ರಿ ಚಂದ್ರನೇಕೊ ಮರೆಯಾಗಿದ್ದ.. ಸದಾಶಿವನಗರದ ಎರಡನೇ ಕ್ರಾಸಿನ ಮನೆಮೇಲಿನ Terraceನಲ್ಲಿ ಕುತ್ತಿದ್ದ ಹಿಮಾಂಶು ಮತ್ತು ಅವನ ತಾಯಿ ಪ್ರಶಾಂತಿನಿ ಮೌನದಿಂದಲೇ ಈ ಹಾಡು ಕೇಳಿಸಿಕೊಂಡಿದ್ದರು...

      ಓಲವೇ ಜೀವನ ಸಾಷತ್‌ಕಾರ....ಓಲವೇ ಮರೆಯಾದ ಮಮಾಕರ...!!

  ಐದು ವರ್ಷದ ಪುಟ್ಟ ಹಿಮಾಂಶು , ಅಮ್ಮನಿಗೆ ಕೇಳುತ್ತಾನೆ , " ಅಮ್ಮ , ಅಪ್ಪ ಏಲ್ಲಿಗ್‌ಗೊಗಿದ್ದಾನೆ... ನಂಗೆ , ಅಪ್ಪ ಬೇಕು " ಅಂತ ಭಾವಪೂರ್ವಕಾವಾಗಿ ಕೇಳಿದ್ದ.... ಅಪ್ಪ !! ಮರೆತುಹೋಗಿದ್ದ ಪ್ರೋಫೆಸರ್‌ ಪ್ರಶಾಂತಿನಿಗೆ ನೆನಪಾದ , ಅತನ ಪ್ರತಿಯೊಂದು ಭಾವಗಳು ನೆನಪಾಗಿದ್ದವು ನಿಷ್ಕಲಮಶವಾಗಿದ್ದ ತನ್ನ ಅಕ್ಕನ ಮೇಲಾದ ದೌರ್ಜನ್ಯಗಳು ನೆನಪದವು , ಮೋಸ ನೆನಪಾದವು , ನಿವೇಧಿತಾ ನೆನಪದಳು !!!! ಎಲ್ಲದಿಕ್ಕಿಂತ ಮಿಗಿಲಾಗಿ ಮರೆತುಹೋಗಿದ್ದ ತನ್ನ ದ್ವೇಷ ನೆನಪಾಯ್ತು , REVENGE ಎಂಬ ಪದ ನೆನಪಾಗಿತ್ತು...
      ಮೂಡಬಿದರೆಯ ಅಳ್ವಸ್ ಕಾಲೇಜಿನಲ್ಲಿ ಮೊದಲ ಬಿಎ ಓದುತ್ತಿದ್ದ ಹುಡುಗಿ ನಿವೇಧಿತಾ , ಕಪ್ಪು ಕಾಡಿಗೆಗೆ ರೆಪ್ಪೆಯೊಡ್ಡಿ ಇಣಕು ನೋಡುತ್ತಿದ್ದ ಕಣ್ಣುಗಳು ಬೆಳಗಿನ ಜಾವದ ಮೊದಲ ಸೂರ್ಯಕಿರಣಗಳು ಕಿಟಕಿಯ ಮೂಲಕ ಇಣುಕಿ ನೋಡುತ್ತಿದ್ದ ಹಾಗೆ ಕಾಣಿಸಿತು , ಎತ್ತರವಾದ ನಿಲುವು , ಹಾಲು ಬಿಳುಪು ಬಣ್ಣದ ಕೆನ್ನೆ , ಕಾಲೇಜಿನಲ್ಲಿ ಅತೀ ಮುದ್ದು ಮುದ್ದುಗಿದ್ದ ಹುಡುಗಿ ನಿವೇಧಿತಾ... ಬಿಎ ಓದುತ್ತಿದ್ದ ಅವಳು ಅದೇಕೊ ವಾಮಚಾರದ ಬಗ್ಗೆ ಆಸಕ್ತಿ , ಮಾಟಗಾತಿ ಸುಬ್ಬಮ್ಮನ ಬಗ್ಗೆ ಆಸಕ್ತಿ . ಪ್ರತಿ ಅಮಾವಾಸೆ , ಹುಣ್ಣಿಮೆಯ ದಿನ ಸುಬ್ಬಮ್ಮ ಮಾರ್ಕಂಡಿಯನ್ನು ಓಲಿಸಿಕೊಳ್ಳುತ್ತಿದ್ದ ಬಗ್ಗೆ ವಿಪರೀತ ಆಸಕ್ತಿ ತೋರುತ್ತಿದ್ದಳು .. ಯಾರನ್ನು ನಂಬುತ್ತಿರದ , ಭಾವನೆಗಳೇ ಇಲ್ಲದ , ಸೆಂಟಿಮೆಂಟ್ ಅವಳ ಭ್ರೂ ಮಧ್ಯದ ರಕ್ತಕುಂಕುಮದಲ್ಲೂ ಜಾಗವಿಲ್ಲದ ಸುಬ್ಬಮ್ಮ ನಿವೇಧಿತಾಳನ್ನು ಅಚ್ಚುಕೊಂಡಿದ್ದಳು . ಆಕೆಗೆ ಪ್ರತಿವಿದ್ಯಯ ಬಗ್ಗೆಯೂ ಮಾಹಿತಿ ನೀಡುತ್ತಿದ್ದಳು... ಅಷ್ಟು Ruthless ಅಗಿದ್ದ ಮಾಟಗಾತಿ ಸುಬ್ಬಮ್ಮ ಆಕೆಯ ಬದುಕಿನ ಕಟ್ಟಕಡೆಯ ಗುರಿಯನ್ನು ನಿವೇಧಿತಾಗೆ ತಿಳಿಸಿದ್ದಳು.. ಅದು ಮಾರ್ಕಂಡಿಯನ್ನು ಒಲಿಸಿಕೊಳ್ಳುವುದು , ಕ್ಷುದ್ರವಿದ್ಯಯಲ್ಲಿ ಪರಂಗತವಾಗುವುದು , ಕಾಮ ಪಿಶಾಚಿಯನ್ನು ಪ್ರತ್ಯಕ್ಷಿಸುವುದು . ಇದೆಲ್ಲ ನೋಡುತ್ತಿದ್ದ ನಿವೇಧಿತಾಗೆ ಭಯವಾಗಲಿ , ಅಳುಕಗಲಿ ಇರಲಿಲ್ಲ ಅದರೆ ಅವಳಿಗೆ ಮತ್ತಷ್ಟು ಅಸಕ್ತಿ ಹೆಚ್ಚುತ್ತಿತ್ತು...
       ತನ್ನ ಓದು , ಮನೆ , ಮಾಟದ ಬಗ್ಗೆ ಆಸಕ್ತಿಯಿದ್ದ ನಿವೇಧಿತಾಗೆ ಹುಡುಗನೊಬ್ಬ ಪ್ರೀತಿಯ ಬಯಕೆಯಿಟ್ಟ ತುಂಬಾ ಸ್ಪುರದೃಪಿಯಾದ ಯುವಕನನ್ನು ನಿವೇಧಿತಾ ಮರುಪ್ರೀತಿಸದೆ ಇರಲಿಲ್ಲ... ಇದು ತನ್ನ ಬದುಕಿಗೆ Brutal ಅಗಬಹುದು , ನನ್ನ destroy ಮಾಡಬಹುದೆಂದು ಊಹೇ ಕೂಡ ಮಾಡಿರಲಿಲ್ಲ ಅವಳು!!
ಪ್ರೀತಿ ಎರಡು ವರ್ಷಗಳ ಕಾಲ ಮುಂದುವರೆದಿತ್ತು , ಮರಗಳನ್ನು ಸುತ್ತಿಯಾಗಿತ್ತು , ಸಿನಿಮಾ long ride ಹೀಗೆ ಎಂಜಾಯ್‌ ಮಾಡಿದ್ದರು... ನಿವೇಧಿತಾ ಅವನನ್ನು ತುಂಬಾ ನಂಬಿದ್ದಳು , ಪ್ರೀತಿಸಿದಳು , ಅರದಿಸಿದ್ದಳು .... ಎರಡು ಧರ್ಮದ ದಂಪತಿಗಳ ಮಗನಗಿದ್ದರಿಂದ ನಿವೇಧಿತಾಳನ್ನು ಅವನೊಂದಿಗೆ ಮದುವೆ ಮಾಡಿಕೊಳ್ಳಲು ಅವಳ ತಂದೆ ಓಪ್ಪಿಕೊಂಡಿರಲಿಲ್ಲ... ಅದರೆ ಶ್ರೀಮಂತರ ಮಗಳಳಾಗಿದ್ದ ನಿವೇಧಿತಾ ಓಡಿ ಹೋಗಿ ಮದುವೆಯಾಗಿದ್ದರು.. ಅದರೆ..?? ಅದರೆ ನಿವೇಧಿತಾಳ ಅಸ್ತಿಯನ್ನು ನೋಡಿ ಪ್ರೀತಿಸಿದ್ದ ಅತ ಅವಳನ್ನ ಜಸ್ಟ್ ಯೂಸ್ ಮಾಡಿ ಎಸೆದಿದ್ದ.. ಕಷ್ಟ ಕೊಟ್ಟ , ಬರುಬರುತ್ತಾ ತುಂಬಾ brutalಅಗಿ behave ಮಾಡಿದ್ದ ಆತ ಅವಳನ್ನ ಕೊಲೆಮಾಡಿಬಿಟ್ಟಿದ್ದ... ಅವನು  Alexander ರಾಜನಾಥ ಚಟರ್ಜಿ... 
  ಆಗ ತಾನೇ national ಕಾಲೇಜಿನಲ್ಲಿ  I pu ಓದುತ್ತಿದ್ದ ಮುಗ್ದ ಹುಡುಗಿ ಪ್ರಶಾಂತಿನಿಗೆ ಈ ವಿಷಯ ತಿಳಿಯದೆ ಇರಲಿಲ್ಲ !! ಅಕ್ಕನನ್ನು ಕೊಂದವನ ಬಗ್ಗೆ ಉಗ್ರ ಕೋಪ ಮಾಡಿಕೊಂಡಳು . ಮನೆಯಲ್ಲಿ ವಿಷಯ ತಿಳಿಸಿದರೆ ಏನು ಆಗದು ಎಂದು ಅರೆತ ಪ್ರಶಾಂತಿನಿ ಮಾಟಗಾತಿ ಸುಬ್ಬಮ್ಮನಿಗೆ ವಿಷಯ ತಿಳಿಸಿಲು ಅಣಿಯದಳು...
   ಅದು ಮೆಜೆಸ್ಟಿಕ್ಕಿನ ಎದುರು , ಆಯುರ್ವೇದದ ಆಸತ್ರೆಯ ಪಕ್ಕ ರಾಜ್‌ಮಹಲ್ ಹೊಟೇಲೆಂಬ ಮುಗಿಲೆತ್ತರದ ಕಟ್ಟಡದ ಮುಂದೆಯೇ , ಮೆಜೆಸ್ಟಿಕ್ಕಿನಿಂದ ಮಲ್ಲೇಸ್ವರಕ್ಕೆ ಹೋಗುವ ಅಂಡರ್‍್ಬ್ರಿಡ್ಜ್ ರಸ್ತೆಯ ಒಂದು ಪಾರ್ಶದ ಮೇಲೆ ಹರಡಿಕೊಂಡಿರುವ ಮಹಾ ಕೊಳಕು ಸ್ಲಮ್ಮೇ ಲಕ್ಷಣಪುರಿ!! ಅದು ಇವತ್ತಿಗೂ ಇದೆ. ಮೆಜೆಸ್ಟಿಕ್ಕಿನ ಎಲ್ಲ ಪಾಪವೂ ಘನೀಭವಗೊಂಡು ಈ ಲಕ್ಷಣಪುರಿ ಸೃಷ್ಟಿಯಾದಂತಿದೆ . ಅಂತಹ ಕೆಟ್ಟಾಕೊಳಕು ಸ್ಲಮ್ಮೆನಲ್ಲಿ ಒಂದೇ ಒಂದು ಬ್ರಾಹ್ಮಣರ ಮನೆ!
   ಅದು ಮಾಟಗಾತಿ ಸುಬ್ಬಮ್ಮನದು !!
 ಜಗತ್ತಿನಲ್ಲಿ ತಾನು ಪ್ರೀತಿಸಿದ , ಗೌರವಿಸಿ , ನಂಬಿದ್ದ ಹುಡುಗಿ ನಿವೇಧಿತಾ ಸಾವು ಮಾಟಗಾತಿ ಸುಬ್ಬಮ್ಮನಿಗೆ ವಿಚಲಿತಗೊಳಿಸಿತು . ಭಾವನೆಗಳೇ ಮರೆತುಹೋಗಿದ್ದ ಸುಬ್ಬಮ್ಮ ಒಂದು ಕ್ಷಣ ನಿವೇಧಿತಾಳಿ ಗೋಸ್ಕರ ಮರುಗಿದ್ದಳು . ತನ್ನ ಬದುಕಿನ ಗುರಿ ಒಂದಲ್ಲ ಎರಡು!! ಎಂದು ತೀರ್ಮಾನ ಮಾಡಿದಳು... ಒಂದು ಕರ್ಣ ಪಿಶಾಚಿ-ಮಾರ್ಕಂಡಿಯನ್ನು ಒಲಿಸಿಕೊಳ್ಳುವುದು ಎರಡನೇಯದು alexander ರಾಜನಾಥ ಚಟರ್ಜಿಯನ್ನು ತನ್ನ ದಿವ್ಯ ಶಕ್ತಿಯಿಂದಲೆ ಸಾಯುಸುವುದು.... ಅದು ಮಾರ್ಕಂಡಿಗೆ ಬಲಿ ನಿಡುವುದು!!
     ಹೀಗೆ ೧೪ ವರ್ಷದ ಹಿಂದಿನ ನೆನಪಿಗೆ ಹೋಗಿದ್ದ ಹಿಮಾಂಶು ವಾಸ್ತವಕ್ಕೆ ಇಳಿದಿದ್ದ , ಮಾಟಗಾತಿ ಸುಬ್ಬಮ್ಮ ಈಗಗಲೇ  ಕರ್ಣಪಿಶಾಚಿ *ಯನ್ನು ಒಲಿಸಿಕೊಳ್ಳಲು ದೊಡ್ಡ ಮಾರಣ ಹೋಮ ಶುರುಮಾಡಿ ೮ ತಿಂಗಳಾಗಿತ್ತು.. ೮ ತಿಂಗಳಲ್ಲಿ ೧೬ ಬಲಿ ; ಇನ್ನು ಕೇವಲ ೪ ತಿಂಗಳಲ್ಲಿ ಭಾರತದ ಕೇಲವೆ ಕ್ಷುದ್ರಸಾಧಕರು ಸಾಧಿಸಿಕೊಂಡಿರುವ ಉಗ್ರ ವಿದ್ಯಾಯನ್ನು ಸಾಧಿಸಿಕೊಳ್ಳಲಿದ್ದಳೆ ಮಾಟಗಾತಿ ಸುಬ್ಬಮ್ಮ... ಅವಳ ೨೪ ಬಲಿ alexander ರಾಜನಾಥ ಚಟರ್ಜಿನ......??


      ಓಲವೇ ಜೀವನ ಸಾಕ್ಷತ್‌ಕಾರ...! ಹಾಡು ಕೇಳಿದೊಡನೆ ದಶಕಗಳ ಹಿಂದಿನ ನೆನಪಿಗೆ ಹೋಗಿದ್ದ ಹಿಮಾಂಶು ಪುನಃ ವಾಸ್ತವಕ್ಕೆ ಇಳಿಯುತ್ತಾನೆ , ರೌದ್ರ ರಮಣೀಯವಾಗಿದ್ದ ನಲ್ಲಮಲ ಅರಣ್ಯದಲ್ಲಿ ರಾತ್ರಿ 11 ಗಂಟೆ 15 ನಿಮಿಷದ ಕತ್ತಲೆಯಲ್ಲಿ ಅವರಿಬ್ಬರು ಕರಗಿ ಹೋಗಿದ್ದರು..

   ಇತ್ತ ರಾತ್ರಿ 11  ಗಂಟೆ 17 ನಿಮಿಷ ನಿದ್ದೆಯಿಲ್ಲದ ಕಣ್ಣುಗಳಲ್ಲೆನೊ ಯಶಸ್ಸು ಸಿಕ್ಕಿದ ಸಂತೋಷ ನಲಿಯುತ್ತಿತ್ತು.. ಕೇವಲ 22 ಗಂಟೆ.. Just 22 hours! ಇಡೀ ಅಂಧ್ರ-ಕರ್ನಾಟಕ ಪೋಲಿಸರಿಗೆ ತಲೆ ನೋವಗಿದ್ದ ಹಂತಕ ಸೆರೆಯಾಗುತ್ತಾನೆ ಅಂತ ACP ಪ್ರತಾಪ್‌ ಕುಮಾರ್‌ ಯೋಚಿಸುತ್ತಿದ್ದರೆ ಎದುರಿಗೆ ಕುತ್ತಿದ್ದ ಬೆಂಗಳೂರು ಇತಿಹಾಸ ಕಂಡ ಅತ್ಯಂತ ಟಾಫ್‌ ಕಾಪ್‌ DYSP ಶಿವರಾಮಪ್ಪ ನಾಳಿನ ಪ್ಲೆನ್‌ಗಳ ಸಂಪೂರ್ಣ ವಿವರಗಳನ್ನು ನೀಡುತ್ತಿದ್ದರು.. ಕೇವಲ ಇನ್ನು 7 ಗಂಟೆಯಲ್ಲಿ ಪೋಲಿಸರೆಲ್ಲ ತಮ್ಮ ಕಾರ್ಯಚರಣೆಗೆ ಸಜ್ಜಗಬೇಕು . ಅದರೆ  DYSP ಶಿವರಾಮಪ್ಪ  ಬೇರೆನೊ ಪ್ಲೆನ್‌ನಲ್ಲಿದ್ದರು. ಅದು ಕೇವಲ ACP ಪ್ರತಾಪ್‌ ಕುಮಾರ್‌ ಮತ್ತು ಅವರು ಈ ಕಾರ್ಯಚರಣೆಯಲ್ಲಿ ತೊಡಗುವುದು ಎಂದು ಕರ್ನಾಟಕ ಮುಖ್ಯಮಂತ್ರಿಗಳ ಮುಂದೆ ವಿವರಿಸುತ್ತಿದ್ದರೆ . ಮುಖ್ಯಮಂತ್ರಿಗಳಿಗೆ ಒಂದು ಕ್ಷಣ ದಿಗಿಲು ಬಡಿದಿತ್ತು... ಕೇಲವೆ ನಿಮಿಷದಲ್ಲಿ ಅವರ ಕಾರ್ಯಚರಣೆಯ ಶೈಲಿ ಬದಲಾಗಿತ್ತು.. DYSP ಶಿವರಾಮಪ್ಪ ಎಲ್ಲಾರ ಊಹೆಗೂ ನಿಲುಕದ ದೊಡ್ಡ ಕಾರ್ಯಚರಣೆಗೆ ಅಣಿಯಾಗಿದ್ದರು..

     ತಮಗೆ ಸಿಕ್ಕಿದ ಸಿಸಿ-ಟಿವಿ ದೃಶ್ಯಗಳಲ್ಲಿ ಅವರು ಕಂಡಿದ್ದು ಒಂದು ನಾಯಿ.. ಹುಲಿ ಗಾತ್ರದ ನಾಯಿ ಕೊಲೆಯಾದ ದಿನವೆಲ್ಲ ರೈಲ್ವೆ ನಿಲ್ದಾಣದಲ್ಲಿ ಓಡಡುತ್ತಿತ್ತು... ಸಿಸಿ-ಟಿವಿಯಲ್ಲಿ ಅವರಿಗೆ ಸಿಕ್ಕ ಮತ್ತೊಂದು ದೃಶ್ಯದಲ್ಲಿ ಕಂಡಿದ್ದು ಒಂದು ಆಕೃತಿ.. ಮತ್ತೆ ಮತ್ತೆ ಹಲವು ಸಿಸಿ-ಟಿವಿಯಲ್ಲಿ ಕೊಲೆಯಾದ  ಅಷ್ಟು ದಿನದಲ್ಲಿ ರೈಲಿನಲ್ಲಿ ಕಾಣಿಸಿಕೊಂಡಿದ್ದ ಆಕೃತಿ ಯಾರು ಎಂದು ತಿಳಿಯಲು ಕಷ್ಟವಾಗಿರಲಿಲ್ಲ.. ಅ ಆಕೃತಿಯ ಹೆಸರು "ಹಿಮಾಂಶು!!"
 
                    ಒಡೆದು ಬಿದ್ದ ಕೊಳಲು ನಾನು
                    ನಾದ ಬರದು ನನಲ್ಲಿ..!!

       ವಾಸ್ತವಕ್ಕೆ ಇಳಿದ ಹಿಮಾಂಶುವಿಗೆ ಆಗ ತಾನೇ ತಾನು ಓದುತ್ತಿದ್ದ ಅಡಿಗರ ಕಾವ್ಯ ನೆನಪಾಗಿ ಗದ್ಗತಿತನಾದ.. ಅಷ್ಟು ರುದ್ರ ನಲ್ಲಮಲ ಅರಣ್ಯದಲ್ಲೆನೊ ನೀರವ ಮೌನ..! ಅಲ್ಲಿ ಇದ್ದದ್ದು ಹಿಮಾಂಶು , ಶಾಲಿನಿ ಮತ್ತು ಮೊಡದ ಮರೆಯಲ್ಲಿ ಮರೆಯಾಗಿ ನಾಳಿನ ಹುಣ್ಣಿಮೆಗೆ ಸಿದ್ದನಾಗಿದ್ದ ಚಂದ್ರ! ಹಿಮಾಂಶುವಿಗೆ ಭಾವನೆಗಳು ಉಕ್ಕಿ ಸುನಾಮಿ ಅಲೆಗಳು ಅಪ್ಪಳಿಸುವ ಹಾಗೆ ಒಮ್ಮೆಲೆ ಅಪ್ಪಳಿಸಿದವು... ತನಗೆ ತಿಳಿಯದಂತೆ ಹಿಮಾಂಶು ಶಾಲಿನಿಯನ್ನು ಅ ಕತ್ತಲ ಕಠೋರ ರಾತ್ರಿಯಲ್ಲಿ ತಬ್ಬಿ ಅತ್ತುಬಿಟ್ಟಿದ್ದ. ನಲ್ಲಮಲ ಅರಣ್ಯದಲ್ಲಿ ಕಾಲ ಸ್ತಭ್ದಗೊಂಡಿತ್ತು..!    ನಿರವ ಮೌನ ಅವರಿಸಿತು . ಅದು ಅವರು ಶೈಕ್ಷಣಿಕ ಪ್ರವಾಸಕ್ಕೆ ಬಂದ ಕೊನೆಯದಿನ . ಮರುದಿನ ಅವರು ಪುನಃ ಟ್ರೇನ್‌ನಲ್ಲಿ ಬೆಂಗಳೂರಿಗೆ ತಲುಪಬೇಕಿತ್ತು .

   ಅ ಕತ್ತಲ ರಾತ್ರಿಯಲ್ಲಿ ಅವರೇನು ಮಾತಾಡದೆ ಸುಮ್ಮನೆ ಕುಳಿತುಬಿಟ್ಟರು . ಕಣ್ಣಗಳೊಳಗಿನ ಅವನ ಮೃದುತ್ವ ಶಾಲಿನಿಯ ಅಪರೂಪ ಸೌಂದರ್ಯವನ್ನು ಸುಮ್ಮನೆ ದಿಟ್ಟಿಸುತ್ತಿತ್ತು . ಅದರಲ್ಲಿ ಆಸೆಯಿರಲಿಲ್ಲ , ಅವಸರದ ಛಾಯೆ ಇರಲಿಲ್ಲ . ಆಸಲು ಪ್ರಶ್ನೆಗಳೇ ಇರಲಿಲ್ಲ.. ಅಲ್ಲಿ ಇದ್ದಿದ್ದು ಕೇವಲ ಆರಾದನೆ.. ಶಾಲಿನಿಯ ಆರಾದನೆ... ಅವಳ ಪ್ರೀತಿಯ ಆರಾದನೆ. ಮಾತೆ ಮರೆಸುವ ನೀರವ ಮೌನ ರಾತ್ರಿ 12:10 ರವರೆಗು ಸುಮ್ಮನೆ ಕುಳಿತು ಒಬ್ಬರನೊಬ್ಬರು ನೋಡುತ್ತಿದ್ದರು . ನಂತರ ಅವರಿದ್ದ ರೂಮಿನಿಂದ ಬಂದ ಶಬ್ದದಿಂದಾಗಿ ಇಬ್ಬರು ಆತುರಾತುರವಾಗಿ ಕಣ್ಣಿನಲ್ಲೆ ಬೆಳಗ್ಗೆ ಸಿಗುತ್ತೆನೆಂದು ಮಿಂಚಂತ್ತೆ ಮಾಯಾವಾಗುತ್ತಾರೆ
..
    ಸಾಲು ಸಾಲು ಸಾವುಗಳಿಗೆ ಸಾಕ್ಷಿಯಾಗಿದ್ದ ಪ್ರಶಾಂತಿ ಎಕ್ಸ್‌ಪ್ರೇಸ್‌ ಒಡಿಶಾದ ಭುಭನೇಶ್ವರದಿಂದ ಅಂಧ್ರದ ಮೂಲಕ ಬೆಂಗಳೂರಿಗೆ ಬರಲು ಸಜ್ಜಗುತ್ತಿತ್ತು . ಸಮಯ ಬೆಳಗ್ಗೆ 8 ಗಂಟೆ 30 ನಿಮಿಷ ಕಪ್ಪು ಸುಂದರಿ  ಪ್ರಶಾಂತಿ ಎಕ್ಸ್‌ಪ್ರೇಸ್‌ ಹೊಗೆಯನ್ನು ಹೊರಹಾಕುತ್ತ ಬೆಂಗಳೂರಿನೆಡೆಗೆ ಬರುತ್ತಿತ್ತು .ಅಷ್ಟು ಜನರ ಮಧ್ಯ ಶಾಲಿನಿ ಮತ್ತು ಹಿಮಾಂಶು ನಿಚ್ಚಳ ಮೌನದಿಂದ ಏನು ಮಾತಾಡಿರಲಿಲ್ಲ . ಭುಭನೇಶ್ವರದಿಂದ ಟ್ರೇನ್‌ ಬಿಟ್ಟೊಡನೆ ಪೋಲಿಸರು ಆಲರ್ಟ್ ಆಗುತ್ತಾರೆ . ಮಫ್ತಿಯಲ್ಲಿದ್ದ ಪೋಲಿಸರು ಕ್ಷಣ ಕ್ಷಣದ ಮಾಹಿತಿಯನ್ನು ವಿಶಾಕಪಟ್ಟಣದಲ್ಲಿದ್ದ ಇಬ್ಬರು ದೈತ್ಯ ಪೋಲಿಸರಿಗೆ ನೀಡುತ್ತಾ ಅವರ ಗಮನಕ್ಕೆ ಬಂದದ್ದು ಇಂದು ಹುಣ್ಣಿಮೆಯಂತ! ಭುಭನೇಶ್ವರದಿಂದ ಭ್ರಮ್ಮಪುರ ದಾಟಿ ಅಂಧ್ರದ ಗಡಿಹೊಕ್ಕು ಸುಮಾರು ಮದಾಹ್ನ 12:10ಕ್ಕೆ ಶ್ರೀಕಾಕುಳಂಗೆ ಟ್ರೇನ್‌ ಬಂದು ನಿಂತಿತ್ತು , ಅದೇ ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಬೆಂಗಳೂರಿನ ಸೆಂಟ್‌ ಡೇವಿಡ್‌ ಕಾಲೇಜು ವಿದ್ಯಾರ್ಥಿಗಳಲ್ಲೆ ಪ್ರಯಾಣ ಬೆಳೆಸಿದರು.. ಅದರಲ್ಲಿ ಹಿಮಾಂಶು ಅಂತ ಒಬ್ಬ ಹಂತಕನಿದ್ದ ಎಂದು ಗೊತ್ತಿದ್ದು ಕೇವಲ ಇಬ್ಬರಿಗೆ ACP ಪ್ರತಾಪ್‌ ಕುಮಾರ್‌ ಮತ್ತು DYSP ಶಿವರಾಮಪ್ಪ !

   ಟ್ರೇನ್‌ ಶ್ರೀಕಾಕುಳಂನಿಂದ ಒಂದು ಗಂಟೆಯೊಳಗೆ ವಿಶಾಕಪಟ್ಟಣಕ್ಕೆ ಬಂದಿತ್ತು . ಅಷ್ಟು ಹೀನಾಯ ಕೊಲೆಗಳನ್ನು ಕಂಡಿದ್ದ ಟ್ರೇನ್‌  ಒಳಕ್ಕೆ ಆಗ ಹತ್ತುತ್ತಾರೆ ACP ಪ್ರತಾಪ್‌ ಕುಮಾರ್‌ ಮತ್ತು DYSP ಶಿವರಾಮಪ್ಪ . ಟ್ರೇನ್‌ ನಿಚ್ಚಳವಾಗಿ ತನ್ನ ಪಥದಲ್ಲಿ ಸಮುದ್ರ ಗಾಂಭಿರ್ಯ ಮರೆಯುತ್ತಾ ಹೋಗುತ್ತಿದ್ದರೆ ಅಲ್ಲಿದ್ದ ನಾಲ್ಕು ಜನರ ತಲೆಯಲ್ಲಿ ಲಕ್ಷ ಲಕ್ಷ ಯೋಚನೆ.. ಪ್ರಶಾಂತಿ ಎಕ್ಸ್‌ಪ್ರೇಸ್‌ ಗುಂಟುರು ತಲುಪುವಷ್ಟರಲ್ಲಿ ಕತ್ತಲು ಕವಿದಿತ್ತು . ಹುಣ್ಣಿಮೆಯ ಚಂದ್ರ ತನ್ನ ಸೌಂದರ್ಯವನ್ನು ಬಿರುತ್ತಿದ್ದ . ಕತ್ತಲ ರಾತ್ರಿಯಲ್ಲಿ ಟ್ರೇನ್‌ ಗುಂಟುರು ದಾಟಿದರು ಶಾಲಿನಿ-ಹಿಮಾಂಶುವಿನ ನಡುವೆ ಒಂದೇ ಒಂದು ಮಾತಿರಲಿಲ್ಲ . ನಿಶಬ್ಧವಾಗಿದ್ದ ಹಿಮಾಂಶು . ಅವನೊಳಗಿದ್ದ ಹಂತಕ ಸತ್ತುಹೋಗಿದ್ದಾನ.?? ಟ್ರೇನ್‌ ಧರ್ಮವರಂ ಜಂಕ್ಷಣ್‌ ದಾಟಿ ಅನಂತಪುರಕ್ಕೆ ತಲುಪಲು ಐದು ನಿಮಿಷ ಬಾಕಿಯಿತ್ತು. ಹಿಮಾಂಶುವಿನ ತಲೆಗೆ ತನ್ನ ಗನ್‌ point ಮಾಡ್ತ ನಿಂತುಬಿಟ್ಟಿದ್ದರು DYSP ಶಿವರಾಮಪ್ಪ.. ತಾವು ಊಹಿಸಿದಂತೆ ಹಿಮಾಂಶು ಮರು ಹೊರಟ ಮಾಡುತ್ತಿಲ್ಲ ಅಂತ ಹೊತ್ತಗಿದ್ದೆ ತಡ ಅವನನ್ನು ನಯಾವಾಗಿ ಅರೆಷ್ಟ್ ಮಾಡಿದ್ದರು ACP ಟೈಗರ್‌ ಪ್ರತಾಪ್‌ ಕುಮಾರ್‌ . ರಣಹದ್ದಿನಂತೆ ಕಾಯುತ್ತಿದ್ದ ಮಾಧ್ಯಮಗಳಲ್ಲಿ ಬ್ರೇಕಿಂಗ್‌ ನ್ಯೂಸ್‌  ಬರುತ್ತಿದ್ದರೆ ಪ್ರಶಾಂತಿ ಎಕ್ಸ್‌ಪ್ರೇಸ್‌ ಖುಷಿಪಡುತ್ತಿತ್ತೆನೋ...??

 Gun point ಮಾಡಿಸಿಕೊಂಡು ಕುಳಿತ್ತಿದ್ದ ಹಿಮಾಂಶುನನ್ನು ನೋಡಿ ಶಾಲಿನಿ ಬೆಚ್ಚಿಬಿದ್ದಿದ್ದಳು! "ಹಿಮು...." ಅಂತ ಚಿರಲು ಪ್ರಯತ್ನಿಸಿದಳಾದರು ಅವಳ ಬಾಯಿಯಿಂದ ಶಬ್ದ ಹೊರಬರಲಿಲ್ಲ . ಶಾಲಿನಿಯ ಹಿಮು ಅರೆಷ್ಟ್‌ ಆಗಿದ್ದ . ಎರಡು ಕೈಗಳನ್ನು ಮೆಲೆತ್ತಿ ಶಾರಣಾಗಿ ಬಿಟ್ಟಿದ್ದ ಹಿಮಾಂಶು..! ಅಷ್ಟು ಕೊಲೆಗಳನ್ನು ತಾನೆ ಮಾಡಿದ್ದು ಎಂದು ಮೇಜಸ್ಟಿಕ್‌ನ ಕೂಗಳತೆಯಲ್ಲೆ ಇದ್ದ ಉಪ್ಪಾರಪೇಟೆ ಪೋಲಿಸ್‌ ಸ್ಟೇಷನ್‌ನ ಸೆಲ್‌ನಲ್ಲಿ ಮೌನದಿಂದಲೆ ಹೇಳುತ್ತಿದ್ದಾನೆ ..

  ಹಿಮಾಂಶು ನಿಜಕ್ಕೂ ಕೊಲೆಮಾಡಿದ್ದನಾ..? ಹಿಮಾಂಶು ನಿಜಕ್ಕೂ ಹಂತಕನ...? ಹಿಮಾಂಶು ಶಾರಣಾಗಿದ್ದಾದ್ದರು ಏಕೆ..??


   ನಡೆದಿದ್ದ 16 ಬಲಿಗೆ ಆ ಒಂದು ನಾಯಿ ಸಾಕ್ಷಿಯಾಗಿತ್ತು . 17ನೇ ಬಲಿ ಏಕೋ ಮಾಟಗಾತಿ ಸುಬ್ಬಮ್ಮನಿಗೆ ದೊರೆಯುವಂತಿಲ್ಲ ಅ ಹುಣ್ಣಿಮೆಯಲ್ಲಿ ಆಕೆ ನಡುವಯಸ್ಸಿನ ಹೆಂಗಸ ಬಲಿ ಪಡೆದಿಲ್ಲವೆಂದರೆ ತಾನು  14 ವರ್ಷಗಳಿಂದ ಮಾಡಿದ ಪೂಜೆ ವ್ಯರ್ತವಾಗಿ ಹೋಗಲಿದೆ ಎಂಬುದು ಅವಳಿಗೆ ಅರ್ಥವಾಗಿತ್ತು.. ಹುಲಿಯಂತಿದ್ದ ನಾಯಿ ಶಾಲಿನ ಅಂಧ್ರಕ್ಕೆ ಹೊದಗಲಿಂದಲು ಅವಳ ಮನೆಯ ಮುಂದೆಯೆ ಇತ್ತು..ಇದು ಶಾಲಿನಿ  17ನೇ ಬಲಿಯಾಗುವ ಸೂಚನೆಯಾ...???

          ಹಿಮಾಂಶು ತಲೆಗೆ ತನ್ನ ಗನ್‌ ಪಯಿಂಟ್‌ ಮಾಡಿ ಅದಗಲೇ 16 ಗಂಟೆ ಕಳೆದಿತ್ತು . ಮಾಧ್ಯಮಗಳಲ್ಲಿ ರೈಲ್‌ ರೋಡ್‌ ಹಂತಕ ಸೇರೆಯಾದ ಯಶಸ್ಸು, ವಿಜಯೋತ್ಸವದ ವರದಿಗಳು ಬರತೊಡಗಿದವು . ಒಮ್ಮೆಲೆ DYSP ಶಿವರಾಮಪ್ಪರಿಗೆ ಗೊತ್ತಾಗಿದ್ದು ತಾನು ನಿದ್ದೆ ಮಾಡಿ ಭರ್ತಿ 34 ಗಂಟೆಗಳಗಿವೆ ಎಂದು . 'ಎಷ್ಟು ದೊಡ್ಡ ಕಾರ್ಯಚರಣೆಗೆ ಅಣಿಯಾಗಿದ್ದವುನಾವು ಆದರೆ ಹಿಮಾಂಶು ಇಷ್ಟು ಸಲೀಸಾಗಿ ಸಿಕ್ಕಿಬಿಟ್ಟನ??' No... ಅವರ ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿ ಪುಟ್ಟ ಅನುಮಾನ , ಕಾಲ ಉರಿಳಿದಂತೆ ಅ ಅನುಮಾನ ಡೊಡ್ಡದಗ್ತ ಹೊಯ್ತು.. ಹೆಮ್ಮರವಾಗಿ ಸ್ವತಃ ತಮ್ಮನ್ನೆ ನುಂಗಿಬಿಡುತ್ತೇನೋ ಅಂದುಕೊಂಡರು . ಆಗ ಮಾಧ್ಯಹ್ನ 2 ಗಂಟೆ 30 ನಿಮಿಷ.

     ನಿಶಬ್ಧವಾಗಿದ್ದ ಉಪ್ಪಾರಪೇಟೆ ಪೋಲಿಸ್‌ ಠಾಣೆಯ ಸೆಲ್‌ನೊಳಕ್ಕೆ ಕಾಲಿಟ್ಟರು ಶಿವರಾಮಪ್ಪ. ಭರ್ತಿ 16 ಕೊಲೆಗಳನ್ನು . ಅದು ಬರ್ಬರ ಕೊಲೆಗಳನ್ನು ತಾನೇ ಮಾಡಿದ್ದೇನೆ ಎಂದು ಹೇಳಿ ಒಂದಿಷ್ಟು ಅಳುಕಿಲ್ಲದೆ, ಭಯವಿಲ್ಲದೆ ಹಿಮಾಂಶುವಿನ ಕಣ್ಣುಗಳನ್ನು ನೋಡಿ ಸ್ವತಃ ಶಿವರಾಮಪ್ಪರೆ ಬೆಚ್ಚಿಬಿದ್ದರು , ಆತ ರಾತ್ರಿಯೆಲ್ಲ ನಿದ್ದೆ ಮಾಡಿರಲಿಲ್ಲ . ತನ್ನೊಂದಿಗೆ ತಂದಿದ್ದ ಗೋಪಲಕೃಷ್ಣ ಅಡಿಗರ ಕಾವ್ಯವನ್ನು ಸ್ಪುಟವಾಗಿ ಓದುತ್ತಾ . ಯಾವುದೋ ಯೊಚನೆಯಲ್ಲಿ ತೊಡಗಿದ್ದಾನೆ .

                                    ಹಾಡಿ ಹಾಡಿ ಬೇಸರಾಗಿ
                                   ನೆಲಕೆಸೆದಳು ಕೊಳಲನು;
                                 ಇಂದು ಮೌನದುಸುಬಿನಲ್ಲಿ
                                  ಹುಗಿದಳೆನ್ನ ಮನವನು.

ನಾಲ್ಕು ಸಾಲುಗಳಲ್ಲಿ ಸಾವಿರ ಸಾವಿರ ಅರ್ಥ!!

       ಆತನ ಕಣ್ಣಗಳನ್ನು ಗಮನಿಸಿದ ಶಿವರಾಮಪ್ಪ "ಹಿಮಾಂಶು ನಿಜಕ್ಕೂ ಕೊಲೆಗಾರನೆ?" ಅವರೊಬ್ಬರಿಗೆ ಕೇಳುವಂತೆ ಅಚ್ಚರಿಯಿಂದ , ಆತಂಕದಿಂದ , ಅನುಮಾನದಿಂದ ಕೇಳಿಕೊಂಡರು . ಅಂದು ಸಂಜೆ ನಾಲ್ಕನೆ ಹೆಚ್ಚುವರಿ ನ್ಯಾಯಧೀಶರ ಮುಂದೆ ಅಜರುಪಡಿಸಿ ಅವರ ಆಜ್ಞೆಯಂತೆ ಕೇಂದ್ರ ಕಾರಗೃಹಕ್ಕೆ ಕರೆದೊಯ್ಯುವಷ್ಟರಲ್ಲಿ ಹಿಮಾಂಶು ಕುಸಿದುಬಿದ್ದಿದ್ದ!!
                                                      ** ** **

         14 ವರ್ಷಗಳ ಸಾಧನೆಯ ನಂತರ ಮಾಟಗಾತಿ ಸುಬ್ಬಮ್ಮ ಬೆಂಗಳೂರಿಗೆ ಹಿಂತಿರುಗಿದ್ದಳು . ಅವಳು ಈಗ ಕೇವಲ ವಶೀಕರಣ ಮಾಡುವ ಮಾಟಗಾತಿಯಲ್ಲ ಅವಳು ಕಾಮಕರ್ಣ ಪಿಶಾಚಿಯನ್ನು ಒಲಿಸಿಕೊಂಡಿರುವ , ವಾಮಾಚಾರ ಲೋಕದ ಅತಿದೊಡ್ಡ ಮಾಟಗಾತಿ! ಮಾಟಗಾತಿ ಸುಬ್ಬಮ್ಮ . ಬೆಂಗಳೂರಿಗೆ ಬಂದವಳೆ ತನ್ನ ಗುರಿಯ ಬಗ್ಗೆ ನೆನೆಯುತ್ತಾಳೆ . ಅದರಲ್ಲಿ ಒಂದು ಸಾಧಿಸಿ ಆಗಿತ್ತು ಅದರೆ ಅವಳ ಹೊಟ್ಟೆಯ ಆಳದಲ್ಲೆಲ್ಲೊ ಮತ್ತೊಂದು ಗುರಿ ನೆನಪಿಗೆ ಬಂದದ್ದೆ ಕ್ರೂರಿಯಾಗಿದ್ದಳು ಅದು Alexander ರಾಜನಾಥ ಚಟರ್ಜಿಯ ಸಾವು! ಕೇವಲ ಸಾವಲ್ಲ ತಾನು ಸಾಧಿಸಿರುವ ಕರ್ಣಪಿಶಾಚಿಗೆ ನಿಡುತ್ತಿರುವ ಅತ್ಯಂತ ಕ್ರೂರ ಬಲಿ .ಹುಣ್ಣಿಮೆಯನ ನಿಶಬ್ಧ ರಾತ್ರಿಯಲ್ಲಿ ಬನಶಂಕರಿ ಸಮೀಪವಿರುವ ತಲಘಟ್ಟಪುರ ರಸ್ತೆಯ ಎಡ ಭಾಗದಲ್ಲಿದ್ದ ಸಶ್ಮಾನ ಹೊಕ್ಕಿದಳು . ತನ್ನ ಯುದ್ಧದ ಮೊದಲ ಪೂಜೆಯ ಆರಂಭ. ನಡು ವಯಸ್ಸಿನ ಹೆಂಗಸ ನೆತ್ತರಿಂದ ತಾನು ಸಾಧಿಸಿ ತಂದ ತಲೆ ಬೂರುಡೆಗಡ ಅಭಿಷೇಕ ಮಾಡಿ ಯುದ್ಧಕ್ಕೆ ಆಣಿಯಾಗುತ್ತಿದ್ದರೆ ಅದೆಲ್ಲೊ ದೂರದ ಪುತ್ತೂರಿನ ಕಾಬಕ ಕ್ರಾಸ್‌ನ ದಾಟಿದೊಡನೆ ಬಲಕ್ಕೆ ಕಾಣುವ ಜಮ್ಮ ಮಸೀದಿಯ ಕಾಳೇಗದಲ್ಲಿ ಕುತ್ತಿದ್ದ ಮುಸ್ಲಿಂ ಮಾಂತ್ರಿಕ ಅದೇಕೊ ಎರಡು ನಿಮಿಷ ನಿಶಬ್ಧವಾಗಿ ಕಣ್ಣು ಮುಚ್ಚಿದ್ದ.
  "ತಬಾಹೀ ನಜರ್‌ ಆ ರಹಾಹೈ " ಅಂತ ತನಗೊಬ್ಬನಿಗೆ ಕೇಳಿಸುವಂತೆ ಹೇಳಿಕೊಂಡ!
"ತಬಾಹೀ ನಜರ್‌ ಆ ರಹಾಹೈ " ಎರಡನೇ ಬಾರಿ ನಿಶಬ್ಧದಿಂದ ಹೊರಬಂದು ಉಗ್ರಕೋಪದಿಂದ ಇಡೀ ಮಸಿದೀಯೆ ನಡುಗುವಂತೆ ಕಿರಿಚಿಕೊಂಡ . ಬೆಂಗಳೂರಿನ ಹುಣ್ಣಮೆ ಕತ್ತಲಲ್ಲಿ ಮಾಟಗಾತಿ ತನ್ನ ಮೊದಲ ಪೂಜೆ ಪ್ರಾರಂಬಿಸಿ್ದದಳೆ . ಯುದ್ಧದ ಆರಂಭ! ತನ್ನ ಕೆಲಸ ಶುರುವಾಯ್ತು ಅಂದುಕೊಂಡವನೆ ಕಣ್ಣಮುಚ್ಚಿ ಒಂದೇ ಸಮ ಯಾವುದೋ ಮಂತ್ರವನ್ನು ಸ್ಫುಟವಾಗಿ ಹೇಳಿ ಎದ್ದು ನಿಂತು ಮತ್ತೊಮ್ಮೆ ಹೇಳಿಕೊಂಡ
 "ತಬಾಹೀ ನಜರ್‌ ಆ ರಹಾಹೈ "
   "ಸರ್ವನಾಶ ಕಂಡು ಬರ‍್ತಿದೆ!!"


       ಅದು ಮಾರ್ಚ್ ೩!

          ಹಿಮಾಂಶು ಬಂಧನವಾಗಿ ಅದಗಲೇ ೯೫ ದಿನಗಳು ಉರುಳಿದ್ದವು . ಪೋಲಿಸರು ನಿಯಮದಂತೆ ೯೦ ದಿನಗಳಲ್ಲಿ ಚಾರ್ಚ್‌ಶೀಟ್‌ ಸಲ್ಲಿಸಿ ಆಗಿತ್ತು . ಆತನ ಸೌಮ್ಯ ಕಣ್ಣುಗಳನ್ನು ಗಮನಿಸಿದ್ದ DYSP ಶಿವರಾಮಪ್ಪ ಆ ರಾತ್ರಿಯೆಲ್ಲ ಅವನೊಂದಿಗೆ ಮಾತಾಡಿದ್ದರು . ಎಷ್ಟು ಕೇಳಿದರು ಹಿಮಾಂಶು ತಾನೇ ಕೊಲೆ ಮಾಡಿರುವುದಾಗಿ ಹೇಳುತ್ತಿದ್ದನೆ . ಅದಕ್ಕೆ ಸಕ್ಷಿ ಎಂಬಂತೆ ಹಿಮಾಂಶು ಕೊಲೆಯಾಗಿದ್ದ ೧೬ ಜನರ ವಿವರದ ಸಮೇತ ಹೇಗೆ ಕೊಲೆಯಾಗಿತ್ತೆಂದು ಎತವತ್ತು forensic report ನೀಡಿದ ಆಗೆ ಹೇಳುತ್ತಿದ್ದ . ಮಾತು ಎರಡು ಗಂಟೆಗೂ ಹೆಚ್ಚು ನಡೆದಿತ್ತು ತೀರ ಹೋಗುವ ಮುನ್ನ ಶಿವರಾಮಪ್ಪ , ಹಿಮಾಂಶು ಕಡೆ ತಿರುಗಿ " ಹಿಮಾಂಶು, ಕೊಲೆ ನೀನು ಮಾಡಿರಲು ಸಾಧ್ಯವೆ ಇಲ್ಲ ಎಂದು ನಿನ್ನ ಕಣ್ಣುಗಳು ಸಾರಿ ಸಾರಿ ಹೇಳುತ್ತಿವೆ!, ನೀನು ನೆನಪಿಟ್ಟುಕೋ ಹಿಮಾಂಶು ' I'm not an ordinary Police ಅದು ನಿನಗೂ ಗೊತ್ತು , ನಿಜವಾದ ಹಂತಕನನ್ನು ನಾನು ತಂದು ನಿನ್ನ ಮುಂದೆ ನಿಲ್ಲಿಸುತ್ತೇನೆ.. Take it as a challenge " ಎಂದವರೆ ಅವನ ಉತ್ತರಕ್ಕೂ ಕಾಯದೆ ನಡೆದು ಹೋದರು . ಗಂಟೆ ಬೆಳಗಿನ ಜಾವ ನಾಲ್ಕಗಿತ್ತು .

   ಅದು ಅವನ ಪ್ರಕರಣಕ್ಕೆ ತೀರ್ಪು ನೀಡುವ ದಿನ . ಹಿಮಾಂಶು ಇದಗಾಲೆ ಇಂಡಿಯನ್‌ ಪಿನಲ್‌ ಕೊಡ್‌ ಸೇರಿದಂತೆ ಹಲವಾರು ಬುಕ್‌ಗಳನ್ನು ಓದಿ ಅರಿತಿದ್ದ. ಈ ಕೊಲೆಗಳಿಗೆ ಅವನಿಗೆ ನೂರಕ್ಕೆ ನೂರರಷ್ಟು ಜೀವವಾದಿ ಇಲ್ಲವೇ ಮರಣದಂಡನೆ ! ಅದರೂ ಅವನಿಗೆ ಆಳುಕಿರಲಿಲ್ಲ.

   ಗಾಢ ನಿಲಿಬಣ್ಣದ ಬಸ್ಸಿಗೆ ಹಿಮಾಂಶುನನ್ನು ಹತ್ತಿಸಿಕೊಂಡದ್ದೆ ಬಸ್ಸು ಪರಪ್ಪನ ಅಗ್ರಹಾರ ಡಾಟಿ ಅದಗಲೇ ಹೊಸುರು ಮೇನ್‌ ರೋಡ್‌ ಹೊಕ್ಕಿತ್ತು . ಸುಮಾರು ಎರಡು ಗಂಟೆಗಲ ಬೆಂಗಳೂರು ಟ್ರಾಫಿಕ್‌ ಸರಿಸಿ ಬರುತ್ತಿದ್ದರೆ BTM ಲೇವೊಟ್‌ನ ಅಡ್ಡರಸ್ತೆಯಲ್ಲಿ ಕಾಫಿ ಕುಡಿಯುತ್ತಿದ್ದ ಸೂರಿಯನ್ನ ಕಣ್ಣಲ್ಲೆ ಗಮನಿಸಿದ್ದ ಹಿಮಾಂಶು! ಬಸ್ಸು ಕೆಂಪೇಗೌಡ ರಸ್ತೆಯ ಕಾವೇರಿ ಭವನದ ಹಿಂಭಾಗದಲ್ಲಿದ್ದ ಹೆಚ್ಚುವರಿ ಸಿವಿಲ್‌ ಕೋರ್ಟ್‌ ಗೆ ಬಂದು ನಿಂತಿತ್ತು. ಎರಡು ಗಂಟೆಯಲ್ಲಿ ಹಿಮಾಂಶುವಿನ ಮನಸ್ಸು ಕರ್ನಾಟಕದ ಗಾಡಿ ದಾಟಿ ಪಶ್ಚಿಮ ಬಂಗಾಲದ ಆ ದಾಟ್ಟ ಕಾಡುಗಳನ್ನು ಸುತ್ತಿ ಬಂದಿತ್ತು!!
 
   ಮಾಧ್ಯಮಗಳಲ್ಲಿ ಬ್ರೇಕಿಂಗ್‌ ನ್ಯೂಸ್‌!!

 "೧೬ ಬರ್ಬರ ಕೊಲೆಗಳನ್ನು ಮಾಡಿದ ಹಂತಕನ ಪ್ರಕರಣಕ್ಕೆ ಇಂದು ತೀರ್ಪು ಬಾರುವ ಸಾಧ್ಯತೆ , ಸೌಮ್ಯ ಕಣ್ಣುಗಳ ಹಿಮಾಂಶು ನಿಜಕ್ಕೂ ಕೊಲೆಗಾರನ?!"

  ಆತ ಇದೇ ಮೊದಲ ಬಾರಿಗೆ ಕೊರ್ಟಿಗೆ ಬಂದದ್ದು , ಇಷ್ಟು ದಿನ ಅವನ ವಿಚಾರಣೆ ಸ್ವತಃ ನ್ಯಾಯಧೀಶರ ಮನೆಯಲ್ಲೆ ನಡೆಯುತ್ತಿತ್ತು , ಕೊರ್ಟ್ ಹಾಲ್‌ನಲ್ಲಿ ಜನ ಕಿಕ್ಕಿರಿದು ಸೇರಿದ್ದರು , ಅದು ಮಾಧ್ಯಮಗಳ ಪಾಲಿಗೆ ದೊಡ್ಡ ಸುದ್ದಿ! ರಾಜ್ಯದ ಎಲ್ಲಾ ದಿನ ಪತ್ರಿಕೆಗಳ ಮುಖಪುಟವನ್ನು ಅವರಿಸಿಕೊಂಡಿತ್ತು ಹಿಮಾಂಶುವಿನ ಭಾವಚಿತ್ರ . ಪ್ರತಿಯೊಬ್ಬರು ಆ ಕೇಸಿನ ಬಗ್ಗೆ ಕುತೂಹಲ ಹೊಂದಿದ್ದರು . ಒಬ್ಬ ಶಾಲಿನಿಯನ್ನು ಹೊರತುಪಡಿಸಿ!!!

   ಹಿಮಾಂಶು ಕಟಕಟೆಗೆ ಬಂದು ನಿಂತ. ಗ್ಯಾಲರಿಯಲ್ಲಿ ಕೇವಲ ಮಾಧ್ಯಮ ಲೋಕದ ದಿಗ್ಗಜರು . ಅಷ್ಟು ಆಗಿದ್ದರು ಹಿಮಾಂಶುವಿನ ಕಣ್ಣಿನಲ್ಲಿ ಸೌಮ್ಯತೆ ಮಾಯಾವಾಗಿರಲಿಲ್ಲ. ನ್ಯಾಯಧೀಶರು ಬಂದದ್ದೆ ತಡ ಕೋಟ್‌ ನಿಶಬ್ಧವಾಗಿತ್ತು . ಮೊದಲು ಯಾರು ಮಾತಾಡಬೇಕು ನಾನಾ? ಪಬ್ಲಿಕ್‌ ಪ್ರಸಿಕ್ಯೂಟರ? ಅಥವಾ ನ್ಯಾಯಧೀಶರ? ಅವನಿಗೆ ತಿಳಿಯಾದಾದಿತು , ಚಾರ್ಚ್‌ಶೀಟ್‌ನಲ್ಲದ್ದ ಭರ್ತಿ ೩೧೫ ಪುಟವನ್ನು ನ್ಯಾಯಧೀಶರು ಅದಗಲೆ ಓದಿ ಬಂದಿದ್ದರು . ಹಿಮಾಂಶು ನ್ಯಾಯಧೀಶರುನ್ನು ನೋಡುತ್ತಾ ಒಂದೇ ಸಮನೇ ಅಷ್ಟು ವಿವರವನ್ನು ಸ್ಫುಟವಾಗಿ ನೀಡಿದ್ದ. ಎಲ್ಲೊ ಮರೆಯಾಗಿದ್ದ ಮಳೆ ಗುಡುಗಿನ ಸಮೇತ ಬಂದು ನಿಂತಂತೆ ಭಾಸವಾಗಿತ್ತು .

   ಹಿಮಾಂಶು ಹಂತಕನೆಂದು ಸಾಕ್ಷಿಗಳು ಸಾರಿ ಸಾರಿ ಹೇಳಿದ್ದವು. ಅದಗಲೇ ದೃಶ್ಯ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗಿತ್ತು "  ರೈಲ್‌ ರೋಡ್‌ ಹಂತಕನಿಗೆ ಕಠಿಣ ಶಿಕ್ಷೆ!" ನ್ಯಾಯಧೀಶರು ತಮ್ಮ ಪೆನ್‌ ತೆಗೆದು ತೀರ್ಪಿನ ಕಾಪಿ ಬರೆಯುತ್ತಿದ್ದರೆ.... ಕಡುಕಪ್ಪು ಸ್ಯೂಟ್‌ ಧರಿಸಿದ ಆಕೃತಿ ನ್ಯಾಯಾಲಯದ ಹೊಳ ಹೊಕ್ಕು ಜಡ್ಜ್‌ಗೆ ಯಾವುದೊ ಒಂದು ಫೈಲ್‌ ನೀಡಿ ಹಿಮಾಂಶುವೆಡೆಗೆ ಸೌಜನ್ಯಕ್ಕೂ ಕೂಡ ತಲೆಯತ್ತದೆ 
     " ಇತ ನಿರಪರಾಧಿ!!"
   ಎಂದು ಹೇಳುತ್ತಿದ್ದಾರೆ ಕೋರ್ಟ್‌ನಲ್ಲಿದ್ದ ಅಚ್ಟು ಮಂದಿಗೂ ಒಂದು ಕ್ಷಣ ಅಚ್ಚರಿ! ಆ ಗಾಡ ಕಡು ಕಪ್ಪು ಕೊಟ್‌ ಧರಿಸಿ ಮಾತಿಗಿಳಿದವರು ಕೀಶೊರ್‌ಚಂದ್ರ ಕರ್ನಾಟಕ ರಾಜ್ಯ ಕಂಡ ಹಿರಿಯ ಕ್ರೀಮಿನಲ್‌ ಲಾಯಾರ್‌ " ಟಿ ಎನ್‌  ಕೀಶೊರ್‌ಚಂದ್ರ ವಾರ್ಮ"
                                   *    *   *

    "ಸರ್ವನಾಶ ಕಂಡು ಬರುತ್ತಿದೆ"
  ಆ ಹುಣ್ಣಿಮೆಯ ರಾತ್ರಿ ಬೆಂಗಳೂರಿನ ತಲಘಟ್ಟಪುರದ ಸ್ಮಶಾನದಲ್ಲಿ ಮಾಟಗಾತಿ ಪೂಜೆ ಆರಂಭಿಸುತ್ತಿದ್ದರೆ , ಪುತ್ತೂರು ಜಮ್ಮ ಮಸೀದಿಯಲ್ಲಿ ಕುತ್ತಿದ್ದ ಮಾಂತ್ರಿಕ ಎದ್ದು ನಿಂತು ಕಿರುಚಿದ್ದ.

  ಆ ನಡುರಾತ್ರಿ ತಾನು ಮರೆತುಹೋಗಿರುವ ಕೆಲಸಗಳು ನೆನಪಿಗೆ ಬಂದದ್ದೆ ತಡ ಕಾಬಕ ಕ್ರಾಸ್‌ ಹೊಕ್ಕು ಆಳಿಕೆ ದಾಟಿ ಕಾರಂಜಿಮಳೆ ಕಾಡಿಗೆ ನಡೆದು ಬರುತ್ತಾನೆ . ಅವನದು ಮನಸ್ಸಿನ ವೇಗ . ಉತ್ತಿಟ್ಟಿದ್ದ ಶವವನ್ನು ಹೊರತೆಗೆದು ಮಾಟಗಾತಿಗೆ ಪ್ರತಿರೊದವಾಗಿ ಮತ್ತೊಂದು ಪೂಜೆ ಪ್ರಾರಂಭಿಸಿದ್ದ (ಹಿಂದೂ ಮತ್ತು ಮಸ್ಲಿಂ ಮಾಂತ್ರಿಕರ ಮಾಮಾಚರ ಜಗತ್ತಿನ ಶೈಲಿ  ಬೇರೆಯಿದ್ದರು ಅವರ ಅಂತಿಮ ಗುರಿ ಒಂದೇ ಶುದ್ರ ಸಾಧನೆ!) ತನ್ನ ಗುರುವನ್ನೂ ನೆನಪಿಸಿಕೊಂಡಿದ್ದೆ ತಡ ನೂರಾರು ಕೀಲೊ ದೂರದಲ್ಲಿದ್ದ ಮಾಟಗಾತಿ ಸುಬ್ಬಮ್ಮನ ಮೈ ನಡುಗಿತ್ತು . ಬೆಚ್ಚಿಬಿದ್ದಳು . ಅವಳಿಗೆ ತಾನು ಮಾಡಿದ ೧೪ ವರ್ಷದ ಶುದ್ರ ಸಾಧನೆಯಿಂದ ಅವಳಿಗೆ ಗೋತ್ತಾಗಿದ್ದು ಅವನು ಬಾಬಾ ಶೇಕ್‌ ಕರೀಂ ಎಂದು .

    ಪೂಜೆ ಮಾಡುತ್ತಿದ್ದ ಸುಬ್ಬಮ್ಮ ಅದೇಕೊ ಒಮ್ಮೆಲೆ ತನ್ನ ೧೪ ವರ್ಷಗಳ ಹಿಂದಿನ ಜೀವನಕ್ಕೆ ಮಾರೆಯಾಗಿದ್ದಳು . ದೂರದಲ್ಲಿದ್ದ ಕರೀಂ ಬಾಬಾ ತನ್ನ ಗುರುವನ್ನು ನೆನೆಯುತ್ತಾ ಅದೇ ಪಶ್ಚಿಮ ಬಂಗಾಳದ ಕಾಡಿಗೆ ಹೋಗಿದ್ದ!

  ಅದು  ಅದೇ ದಿನ  ಬೆಳಗಿನ ಜಾವ ೪ ಗಂಟೆ ೫ ನಿಮಿಷ . ಹಿಮಾಂಶು ಭೇಟೆಯಾಡಬೇಕೆಂದು ಕಾಯುತ್ತಿದ್ದ ಹಕ್ಕಿ ತಾನಗೆ ಪಂಜರದೊಳಗೆ ಬಂದಿತ್ತು . ಶಾಲಿನಿಯೇ ಹಿಮಾಂಶುನನ್ನು ಪ್ರೀತಿಸಿ ಅವನ ಪಂಜರದೊಳಕ್ಕೆ ಬಿದ್ದಿದ್ದಳು. ಹಿಮಾಂಶು ತನ್ನ ಗುರಿಯನ್ನು ಸಾಧಿಸೆ ಬಿಟ್ಟ ಎಂದು ಅಂದು ಕೊಳ್ಳುವ ಸಮಯದಲ್ಲಿ ಶಿವರಾಮಪ್ಪ GUN POINT   ಮಾಡಿ ಅವನ ಮುಂದೆ ನಿಂತಿದ್ದ . ಶಾಲಿನಿ ಜಸ್ಟ್‌ ಮೀಸ್‌ ಆಗಿದ್ದಳು.!!!


     ತಾನು ಪ್ರೀತಿಸಿದ ಹಿಮಾಂಶು ಆಗ ತಾನೇ ತನ್ನ ಪರ ಒಲಿಯುತ್ತಿದ್ದ. ಅದೊಂದು ರಾತ್ರಿ, ಯಾರು ಅವರನ್ನು ಕರೆದಿರಲಿಲ್ಲದಿದ್ದರೆ ಶಾಲಿನಿ ತನ್ನ ಮನಸ್ಸಿನ ಅಷ್ಟು ವಿಚಾರವನ್ನು ಹಿಮಾಂಶುವಿಗೆ ತಿಳಿಸಿಬಿಡುತಿದ್ದಳೇನೊ . It just happened . ಅವನೊಡನೆ ಕಾಡುವ ಮೌನದಲ್ಲೆ ಭರ್ತಿ ಒಂದು ಗಂಟೆ ಕೂತು ಎದ್ದು ಹೋಗಿದ್ದ ಶಾಲಿನಿಯ ಹೃದಯದಲ್ಲಿ ಇಂದೆಂದೂ ಕಾಣದ  ಸಂತೋಷ .  ಕತ್ತಲ ರಾತ್ರಿಯಲ್ಲಿ ಗಡಿಯ ರೇಕೆಯಿಲ್ಲದೆ ಹಕ್ಕಿಯಂತೆ ಇಡೀ ಪ್ರಪಂಚವನ್ನ ಸುತ್ತಿ ಬಂದಿತ್ತು . ಹಿಮಾಂಶು ತನ್ನೊಡನೆ ಕಳೆದಿದ್ದ ಪ್ರತಿ ಸೆಕೆಂಡ್‌ನ್ನು ನೆನಪಿಸಿಕೊಳ್ಳುತ್ತಿದ್ದಳು ಶಾಲಿನಿ. ಆ ರಾತ್ರಿ ಅವಳಿಗೆ ನಿದ್ದೆ ಬಂತೋ ಏನೋ ಅದರೆ ಹಿಮಾಂಶುವಿನೊಡನೆ ಸಾವಿರ ಸಾವಿರ ವರ್ಷ ಕಳೆಯುವ ಕನಸಂತು ಬಿದ್ದಿತ್ತು .ಬೆಳಗಿನ ನಿಚ್ಚಳ ಸೂರ್ಯ ಅದಗಲೇ ತನ್ನ presence  ತೋರಿಸಿದ್ದ.ಎಷ್ಟು ಬೇಗ ಬೆಳಕಾಯಿತು!

    ಇದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಮನೆಗೆ ಹೋಗುವ ಸಂಭ್ರಮ ಅರಣ್ಯವನ್ನು ಬಿಟ್ಟು ಹೊರಡುವ ತಳಮಳದಲ್ಲಿ ಕೂಡಿದ್ದರೆ . ಹಿಮಾಂಶು-ಶಾಲಿನಿಗೆ ಮತ್ತೇನೋ ಸಂಭ್ರಮ!  ಅದು ಮಾತುಗಳಿಲ್ಲದ ನಿಚ್ಚಳ ಮೌನ , ಬರೀ ಕಣ್ಣಲ್ಲೆ ಗಂಟೆಗಟ್ಟಲೇ ಮಾತಾಡಿದರು ಸಾಲದಷ್ಟು ಭವನೆಗಳು ಹೊರಡುತ್ತಿದ್ದವು . ಅಲ್ಲಿ ಇದ್ದದ್ದು ನೂರಾರು ದಿನಗಳ ಆರಾಧನೆ , ಮೌನದಲ್ಲೆ ಕೂಡಿದ್ದ ಮಾತುಗಳು , ಭಾವನೆಗಳು ತುಂಬಿದ್ದ ಕಣ್ಣುಗಳು , ಪ್ರೀತಿ ತುಂಬಿದ್ದ ಹೃದಯಗಳು . ನಲ್ಲಮಲ ಅರಣ್ಯದ ಮರಗಳೇ ಕೆಲಕಾಲ ನಾಚಿ ನಲಿದವು , ಮೌನದಿಂದಲೇ ಅಷ್ಟು ಮರಗಳು ಇವರ ಪ್ರೀತಿ ಫಲಿಸಲಿ ಅನ್ನುತ್ತೀವೆ ಎಂದು ಭಾಸವಾಗಿತ್ತು..

    ಕಾಲ ಸ್ತಬ್ಧವಾಗಿತ್ತು!!

           ಸಮಯ 12 ಗಂಟೆ 10 ನಿಮಿಷ
           ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌ ಶ್ರೀಕಾಕುಳಂ ರೈಲು ನಿಲ್ದಾಣಕ್ಕೆ ಬಂದು ನಿಂತಿತ್ತು . ಹಿಮಾಂಶು - ಶಾಲಿನಿ ಎದುರು ಬದರು ಸೀಟಿನಲ್ಲೆ ಕೂತಿದ್ದರು . ಅವರ ನಾಲಿಗೆಯಿಂದ ಮಾತು ಮರಿಚಿಕೆಯಾಗೆಯಿತ್ತು . ಆಗ ಬಂದವರೇ DYSP ಶಿವರಾಮಪ್ಪ ಹಿಮಾಂಶುನನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದರೆ . ಶಾಲಿನಿ ಆಘತದಿಣದ ಕಿರುಚಿದಳು . ಬೆಂಗಳೂರಿಗೆ ಬಂದವಳೇ ತನ್ನ ವೈಭವೋಪೇತ ಮನೆಯ ಬೆಡ್‌ರೂಮಿಗೆ ಹೋದವಳೇ ಒಂದೇ ಸಮನೆ ಆಳುತ್ತಿದ್ದಳು . ಭರ್ತಿ ಐದು ದಿನದ ನಂತರ ತನ್ನ ಹಡಗಿನಂತ BMW  ಕಾರ್‌ ಹತ್ತಿದವಳೇ ಹಿಮಾಂಶುನನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಹೋಗಲು ಅಣಿಯಾದಳು . ಕಾರ್‌ ಮಲ್ಲೆಶ್ವರ ಏಳನೇ ಕ್ರಾಸ್‌ನಿಂದ ಹೊರಬಿದ್ದು ಶೇಶಾದ್ರಿಪುರಂ ರೋಡ್‌ ದಾಟಿ ಮೆಜಸ್ಟಿಕ್‌ ತಲುಪಿತ್ತು ಅಷ್ಟರಲ್ಲಗಲೇ ಶಾಲಿನಿಯ ಮನಸ್ಸು ಬದಲಾಗಿತ್ತು . ಅವಳ ಮನಸ್ಸು ಹಿಮಾಂಶು ಕೊಲೆಗಾರನಲ್ಲ ಇನ್ನು ಕೇಲವೆ ದಿನದಲ್ಲಿ ನನ್ನ ಬಳಿ ಬರುತ್ತಾನೆ ಎಂದು ತೀರ್ಮಾನ ಮಾಡಿದವಳೇ ಯಾವುದೋ ಯೋಚನೆಯಲ್ಲಿ ಅಲ್ಲೆ ಬಳಿಯಿದ್ದ ಪಾರ್ಕ್‌ನಲ್ಲಿ ಮೌನದಿಂದ ಕುಳಿತುಬಿಟ್ಟಳು..

                                                                  **** *** ****
     ( ರವಿ ಬೆಳಗೆರೆಯವರ ಬರಹಗಳ ಪ್ರೇರಣೆಯಲ್ಲಿ)

     ಮೊದಲ ಪೂಜೆ ಆರಂಭಸಿದ್ದ ಮಾಟಗಾತಿಗೆ 14 ವರ್ಷಗಳ ಹಿಂದಿನ ನೆನಪುಗಳು ಕಾಡ ತೋಡಗಿತು.

   ಅಂದು!

  ನಿವೇದಿತಾ ಸತ್ತ ವಿಷಯವನ್ನು ಪ್ರಶಾಂತಿನಿ ಬಂದು ಮಾಟಗಾತಿ ಸುಬ್ಬಮ್ಮನಿಗೆ ಹೇಳಿದ್ದೆ ತಡ . ತನ್ನ ಗುರಿ ಸಾಧನೆಗೆ ಸಮಯ ಬಂದಿದೆ ಎಂದು ತಿಳಿದವಳೆ ಅವಳ ಪ್ರಯಾಣ ಆಂರಭವಾಗಿಬಿಟ್ಟಿತ್ತು!

  ಧೇನಿಸು ತಾಯೇ...! ಎಂದು ಹೇಳುತ್ತಾ ಹೊರಟ ಸುಬ್ಬಮ್ಮ ಅಂಧ್ರದ ಗಡಿ ದಾಟಿ ಒಡಿಶಾದ ಕಾಮಾಕ್ಯ ದೇಗುಲಕ್ಕೆ ಬರುವಷ್ಟರಲ್ಲಿ ಹುಣ್ಣಿಮೆಯಾಗಿತ್ತು . ಅಲ್ಲಿ ಆಕೆಗೆ ಸಿಗುತ್ತಾನೆ ಅಘೋರಿ ಸಾಧನೆಗೈದ ಪ್ರಜ್ವಲನಾಥ . ಕಾಮಕರ್ಣ ಪಿಶಾಚಿಯನ್ನು ಹೋಲಿಸಿ ಕೊಳ್ಳಬೇಕಾದರೆ ಏನು ಮಾಡಬೇಕು ಎಂದು ವಿವರ ನೀಡುತ್ತಿದ್ದ ಪ್ರಜ್ವಲನಾಥನಿಗೂ ಕಾಣಿಸಿದ್ದು ಅದೇ "ಸರ್ವನಾಶ!"

    ಇಲ್ಲೆ ಪಶ್ವಿಮ ಬಂಗಾಳದ ಕಾಡಿನಲ್ಲಿ ಕಾಮಕರ್ಣ ಪಿಶಾಚಿಯನ್ನು ಸಾಧಿಸಿರುವ ಏಕೈಕ ಮಾಂತ್ರಿಕನಿದ್ದಾನೆ . ಅವನ ಬಳಿ ಹೋದರೆ ನಿನ್ನ ಗುರಿ ಮುಟ್ಟ ಬಹುದೆಂದು ಹೇಳುತ್ತಿದ್ದ ಪ್ರಜ್ವಲನಾಥ ಇದ್ದಕ್ಕಿದ್ದಂತೆ ಪಶ್ಚಿಮ ದಿಕ್ಕಿನೆಡೆಗೆ ದಾವಿಸಿ ಬಿಟ್ಟ.. ಅವನಿಗೆ ಸುಬ್ಬಮನ ಭವಿಷ್ಯ ಕಾಣಿಸಿತ್ತಾ..??

    ಅದು ಹುಲಿಗಳಿಗೆ ತಾಣವಾಗಿದ್ದ ಪಶ್ಚಿಮ ಬಂಗಾಳದ ರುದ್ರ ಕಾಡು! 14 ವರ್ಷ ಬಾಬಾ ಹೇಳಿದ ಎಲ್ಲಾ ಪೂಜೆಗಳನ್ನು ಮಾಡಿ ಅವನ ಎದುರಿಗೆ ನಿಲ್ಲುತ್ತಾಳೆ ಮಾಟಗಾತಿ ಸುಬ್ಬಮ್ಮ . ಅವನ ಕಣ್ಣಗಳಲ್ಲೆ ಒಂದು ರುದ್ರ ಭಯಂಕರ ನೋಟ . ಡೊಡ್ಡದಾಗಿ ಬೆಳೆದಿರುವ ಗಡ್ಡ , ಹಸಿರು ಜುಬ್ಬಾ ಧರಿಸಿ ಸಶ್ಮಾನ ಮೌನದಲ್ಲಿ ಕುಳಿತಿರುವವನ ಹೆಸರು ಅಯಾಮಾನ್‌ ಅಲ್‌ ಅರಿಫ್‌ !
    ಅರಿಫ್‌ ಬಾಬಾ!!

 ಮಾಟಗಾತಿ ಸುಬ್ಬಮ್ಮನ ಮುಖದಲ್ಲಿ ಹಿಂದೆಂದೂ ಕಾಣದ ಕಾಟಿಣ್ಯತೆ ಮತ್ತು ಏಕಾಗ್ರಾತೆಗಳು ಜಮೆಯಾಗಿದ್ದವು . ಅದು ಅವಳಲ್ಲಿ ಕಾಣಲರಂಭಿಸಿದ ಮೊದಲ Ruthlessnessನ ಅನುಭವ . ಸತ್ತ ಹೆಂಗಸೊಬ್ಬಳ ಗೋರಿ ಮುಂದೆ ಕುತ್ತಿದ್ದ ಮಾಟಗಾತಿ ಮತ್ತು ಅರಿಫ್‌ ಬಾಬಾ ಇಬ್ಬರಿಗೂ ನಿರ್ದಯತೆ ಜಮೆಯಾಗಿದ್ದವು . ನಿಧಾನವಾಗಿ ಸಣ್ಣ ದನಿಯಲ್ಲಿ ಆರಂಭವಾದ ಮಂತ್ರಗಳು ಹತ್ತು ನಿಮಿಷ ಕಳೆಯುವಷ್ಟರಲ್ಲಿ ಕಿವಿಯ ಟಿಂಪ್ಯಾನಮ್‌ ಒಡೆದು ಹೋಗುವಷ್ಟು ತೀಕ್ಷ್ಣವಾಗಿಬಿಟ್ಟವು . ಹುಣ್ಣಿಮೆಯ ಆ ಕತ್ತಲ ರಾತ್ರಿಯಲ್ಲೆ ಭಯನಕತೆ ಸೃಷ್ಟಿಯಾಗಿತ್ತು .ಬಾಬಾ ಮೊದಲಿಗೆ ಸುಬ್ಬಮ್ಮನಿಂದ ದಿಗ್ಬಂಧನ ಪೂಜೆ ಮಾಡಿಸೊದರು . ಗೋರಿಯ ಮುಂದೆ ಪಶ್ಚಿಮಾಭಿಮುಖವಾಗಿ ಕುಳಿತ ಅವಳ ಹಣೆಗೆ ಬಾಬಾ ತಮ್ಮ ಬಲಗೈ ಬೆರಳಿನಿಂದ ಕತ್ತರಿಸಿದ ರಕ್ತ ಕುಂಕುಮ ತಿಲಕ ವಿವರಿಸಿದರು
.
   " ಧೇನಿಸು ಮಗಳೇ... ಬದುಕುವ ಆಸೆಯನ್ನು ಕೂಡ ಬಿಟ್ಟು ಧೇನಿಸು . ಕ್ಷುದ್ರ ಲೋಕದಲ್ಲಿ ಆಸೆಗಳಿಗೆ ಜಾಗವಿಲ್ಲ . ಕರ್ಣ ಪಿಶಾಚಿಯ ಮುಂದೆ ಕಾಮನೆಗಳಿಗೆ ಸ್ಥಳವಿಲ್ಲ . ಇಲ್ಲಿ ಎಲ್ಲವನ್ನೂ , ಎಲ್ಲರನ್ನೂ ತ್ಯಜಿಸಬಲ್ಲೆ . ಆಕೆಯ ಪಾದಗಳಿಗೆ ಶಿರವಿಟ್ಟು ಅದನ್ನೂ ಒಪ್ಪಿಸಿಕೋ ಅನ್ನಬಲ್ಲೆ ಎಂಬಂತಹ ಮುಕ್ತತೆ ಬೇಕು .ನೀನು ನೀನೆಂಬುದನ್ನೂ ಮರೆತು ಕರ್ಣಪಿಶಾಚಿಯನ್ನು ಪ್ರಾರ್ಥಿಸು .ಹೇಳು ಮಗಳೇ... ನನ್ನೊಂದಿಗೆ ಹೇಳು..."

    ಆರಿಫ್‌ ಬಾಬಾ ದೊಡ್ಡ ದನಿಯಲ್ಲಿ ಸುಬ್ಬಮ್ಮನಿಗೆ ಆದೇಶ ನೀಡುತ್ತ ಮಂತ್ರ ಪಠಣ ಮುಂದುವರೆಸಿದರು .ಆದರೆ ದೊಡ್ಡ ದನಿಯಲ್ಲಿ ಅವರು ಹೇಳುತ್ತಿದ್ದ ಮಂತ್ರಗಳ ಪೈಕಿ ಒಂದೇ ಒಂದು ಚಿಕ್ಕ ಶಬ್ದವೂ ಅರ್ಥವಾಗಿರಲಿಲ್ಲ . ಆಗ ಇದ್ದಕ್ಕಿದಂತೆ ನೆಲೆಗೊಂಡ ಮೌನ , ಆ ಸ್ಮಶಾನದ ಕಾವಳದಲ್ಲಿ ಮತ್ತೂ ಭಯಾನಕವೆನ್ನಿಸತೊಡಗಿತು . ಗೋರಿಯ ಮೈ ಬಿರುಕು ಬಿಡತೊಡಗಿದೆ . ಬಾಬಾ ಯಾವುದನ್ನೂ ಗಮನಿಸಿದಂತೆ ಮಂತ್ರಪಠಣ ಮಾಡುತ್ತಲೇ ಇದ್ದಾರೆ . ಗೋರಿಯ ಆಳದಲ್ಲಿ ಅದು ಕದಲತೊಡಗಿದೆ... ಕದಲುತ್ತಿರುವುದು ಹಸೀ ಬಾಣಂತಿಯ ದೇಹ ಎಂಬುದು ಗೊತ್ತಾಗುತ್ತಿದ್ದಂತೆಯೇ ಸುಬ್ಬಮ್ಮನ ದೇಹದಲ್ಲಿ ಕೆಲವು ಬದಲಾವಣೆಗಳಾದವು . ಕೈ ಬೆರಳುಗಳಿಗೆ ದೇಹದ ನೆತ್ತರೆಲ್ಲ ಹರಿದು ಬಂತೇನೋ ಎಂಬಂತೆ ಅವೆಲ್ಲವೂ ರಕ್ತವರ್ಣಕ್ಕೆ ತಿರುಗಿದವು . ನಾಲಗೆ ಕಳಚಿಕೊಂಡು ಹೊರ ಚಾಚಿಕೊಂಡಿತು . ಕಣ್ಣ ದೇದೀಪ್ಯಮಾನವಾದ ಪ್ರಕಾಶದಿಂದ ಪ್ರಜ್ವಲಿಸತೊಡಗಿತು , ಹಣೆಯ ಕುಂಕುಮ ಈಶ್ವರನ ಫಾಲನೇತ್ರದಂತೆ ಉರಿಯತೊಡಗಿತು .

   ಆಕಾಶದಲ್ಲಿ ಎರಡು ಬಾರಿ ಕೋಲ್ಮಿಂಚು ಕಾಣಿಸಿಕೊಂಡು , ಆಗಷ್ಟೆ ಬೀಸತೊಡಗಿದ್ದ ಚಿಕ್ಕ ಮಾರುತವೂ ಸ್ತಬ್ಧವಾಗಿ ಹೋಗಿ, ಸ್ಮಶಾನದಲ್ಲಿ ಆಘಾತಕರ ಮೌನ ಸ್ಥಾಪಿತವಾಗುತ್ತಿದ್ದಂತೆಯೇ ಗೋರಿಯೊಳಗಿನ ಬಾಣಂತಿಯ ಹೆಣ ಅತ್ಯಂತ ಸ್ಪಷ್ಟವಾಗಿ , ನಿಖರವಾಗಿ ಮತ್ತು ನೆಟ್ಟಗೆ ನಿಟಾರಾಗಿ ಎದ್ದು ಕುಳಿತುಕೊಂಡಿತ್ತು!
   ಅದು ಸುಬ್ಬಮ್ಮನ ಕಡೆ ಮುಖ ಮಾಡಿತ್ತು.

 ಶಾಸ್ತ್ರಿಗಳ ಮಂತ್ರಗಳು ಮತಷ್ಟು ಉಧೃತವಾದವು . ಎರಡನೇ ಆವೃತ್ತಿಯ ಆರಂಭವಾದವು . ಮಾಟಗಾತಿ ಸುಬ್ಬಮ್ಮ ಶವದ ಕೊರಳಿಗೆ ದೇವ ಕಣಗಲೆಯ ರಕ್ತಗೆಂಪು ಬಣ್ಣದ ಹಾರವನ್ನು ತೊಡಿಸಿ ತನ್ನ ಬಲ ಮುಂಗೈನ ನರವನ್ನು ಸಟಕ್ಕನೆ ಕುಯ್ದುಕೊಂಡು , ಶವದ ಅಂಗೈಗಳ ಮೇಲಕ್ಕೆ ರಕ್ತ ತರ್ಪಣ ನೀಡಿ ಮಂತ್ರ ಪಠಣ ಮಾಡುತ್ತಿದ್ದಂತೆಯೇ...

      ಹೊತ್ತಿಕೊಂಡಿತು ಜ್ವಾಲೆ ! 

       ಆಗ ಬಿತ್ತು ಒಂದು ಹನಿ ಜ್ವಾಲೆ...
       ಅವಳ ಅಂಗೈ ಮಧ್ಯದ ಗೆರೆಯ ಮೇಲೆ!

      ಕಾಮಕರ್ಣ ಪಿಶಾಚಿನಿ ಮಾಟಗಾತಿ ಸುಬ್ಬನಿಗೆ ಹೋಲಿದಗಿತ್ತು... ಕ್ಷುದ್ರ ಸಾಧನೆಯ ಉತ್ಕೃಷ್ಟ ಅಂತ ಸಾಧಿಸಿಯಾಗಿತ್ತು!! ಕ್ಷುದ್ರ ಲೋಕದ ಅತಿದೊಡ್ಡ ಮಾಟಗಾತಿ ಬೆಂಗಳೂರಿಗೆ ಹಿಂತಿರುಗಿದವಳೇ ಮೊದಲಿಗೆ ಭೇಟಿನೀಡಿದ್ದು ಹಿಮಾಂಶುವಿನ ತಾಯಿ ಪ್ರಶಾಂತಿನಿ ಮನೆಗೆ!
        ಪ್ರಶಾಂತಿನಿ!!?


     ಹಿಮಾಂಶು ಬಂಧನವಾಗಿ ಅದಗಲೇ 95 ದಿನಗಳಾಗಿದ್ದವು , ಕೋರ್ಟ್‌‌ನಲ್ಲಿ ವಿಚಾರಣೆ ನಡೆಯುತ್ತಿತ್ತು... ಇನ್ನೇನೂ ನ್ಯಾಯಧೀಶರು ತೀರ್ಪು ನೀಡಬೇಕು ಆಗ ಬಂದವರೆ ಕ್ರೀಮಿನಲ್‌ ಲಾಯರ್‌   ಟಿ.ಎನ್‌. ಕೀಶೊರ್‌ ಚಂದ್ರ.. "ಇತ ನಿರಪರಾಧಿ" ಅಂದಕ್ಷಣ ಕೋರ್ಟ್‌‌ನಲ್ಲಿದ್ದ ಅಷ್ಟು ಜನಕ್ಕೆ ಅಚ್ಚರಿಯಾಗಿತ್ತು  ಒಬ್ಬ ಶಿವರಾಮಪ್ಪರನ್ನು ಬಿಟ್ಟು. DYSP ಶಿವರಾಮಪ್ಪ !
 ಸ್ವತಃ ಹಿಮಾಂಶುವೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು ನಿಜ ಏನೆಂಬುದು ಶಿವರಾಮಪ್ಪರಿಗೆ ಗೊತ್ತಿತ್ತು..!! ಆಗ ಸಿಗುತ್ತೆ ಕತೆಗೆ ಹೊಸ ತಿರುವು..

       ವಕೀಲ ಕೀಶೊರ್‌ ಚಂದ್ರ ತಮ್ಮ ವಾದ ಪ್ರಾರಂಭಿಸಿದ್ದೆ ತಡ ಕೋರ್ಟ್‌ನೊಳಕ್ಕೆ ಹೊಕ್ಕಿದ ಒಬ್ಬ Constable ಮುಖದಲ್ಲಿ ಅಚ್ಚರಿ ಬೇರೆತ ಭಯ ಅವರಿಸಿರುತ್ತೆ.
"ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಮತ್ತೊಂದು ಕೊಲೆ" ಬೆಚ್ಚಿಬಿದ್ದರು ಪೋಲಿಸರು . ಹಿಮಾಂಶು ಕಣ್ಣಲ್ಲಿ ದುಃಖ, ಭಯ ಮತ್ತು ನಿರಾಕರಣೆ!.. ಭರ್ತಿ ಒಂದು ಗಂಟೆಯ ವಿಚಾರಣೆಯ ಬಳಿಕ ಹಿಮಾಂಶುವಿಗೆ ಜಾಮೀನು ಮಂಜುರಾಗಿತ್ತು . ಕೀಶೊರ್‌ ಚಂದ್ರರ ಮುಖದಲ್ಲಿ ಗೆಲುವು ಸಾಧಿಸಿದ ನಗೆ!

   ಅಂದು ಸಂಜೆ 5 ಗಂಟೆ!
    ಹಿಮಾಂಶೂ ಜೈಲಿನಿಂದ ಹೊರಬಂಧವನೇ ಆ ನಿರ್ಮನುಷ್ಯ ರಸ್ತಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವಾಗ ಅವನಿಗೆ ಆ 14 ವರ್ಷದ ಹಿಂದಿನ ಕ್ರೂರ ನೆನಪುಗಳು ಕಣ್ಣಮುಂದೆ ಬಂತು. ಅದು ಮಾಟಗಾತಿ ಸುಬ್ಬಮ್ಮ ದೊಡ್ಡ ಸಾಧನೆಗೈದ ದಿನ . ಕಾಮಕರ್ಣ ಪಿಶಾಚಿಯನ್ನು ಓಲಿಸಿಕೊಂಡ ದಿನ . ಕ್ಷುದ್ರ ಲೋಕದಲ್ಲೆ ಅತಿದೊಡ್ಡ ಸಾಧನೆಯದು ಅದ್ಕೆ ತನ್ನ ಗುರುವಾದ ಅರೀಫ್‌ ಬಾಬಾನ ಆರ್ಶಿವಾದ ಎಷ್ಟಿತೆಂದರೆ ಆತ ತನ್ನ ಬದುಕನ್ನ ಆರ್ಪಿಸಿಬಿಟ್ಟಿದ್ದ.
* "ಧೇನಿಸು ಮಗಳೇ .... ಬದುಕುವ ಆಸೆಯನ್ನು ಕೂಡ ಬಿಟ್ಟು ಧೇನಿಸು . ಕ್ಷುದ್ರ ಲೋಕದಲ್ಲಿ ಆಸೆಗಳಿಗೆ ಜಾಗವಿಲ್ಲ . ಕರ್ಣ ಪಿಶಾಚಿಯನ ಮುಂದೆ ಕಾಮನೆಗಳಿಗೆ ಸ್ಥಳವಿಲ್ಲ . ಇಲ್ಲಿ ಎಲ್ಲವನ್ನೂ , ಎಲ್ಲರನ್ನೂ ತ್ಯಜಿಸಬಲ್ಲೆ. ಆಕೆಯ ಪಾದಗಳಿಗೆ ಶಿರವಿಟ್ಟು ಅದನ್ನೂ ಒಪ್ಪಿಸಿಕೋ ಅನ್ನಬಲ್ಲೆ ಎಂಬತಹ ಮುಕ್ತತೆ ಬೇಕು . ನೀನು ನೀನೆಂಬುದನ್ನೂ ಮರೆತು ಆಸೆಗಳನ್ನು ತೆಜಿಸು "* ಎಂದು ಬಾಬಾ ಹೇಳಿದ್ದರು. ಅದರೆ ಅವಳು ಆಸೆಯನ್ನು ತೇಜಿಸಿರಲಿಲ್ಲ . ಕೋಪವನ್ನು ತೆಜಿಸಿರಲಿಲ್ಲ . ದ್ವೇಷವನ್ನು ಕೂಡ.. ಅವಳ ಗುರಿ ಸರ್ವನಾಶ ಮಾಡುವುದಿತ್ತು..  ಕಾಮಕರ್ಣ ಪಿಶಾಚಿಯನ್ನು ಹೋಲಿಸಿಕೊಂಡ ಮೇಲೆ ಅದು ಅವಳ ಸರ್ವನಾಶಕ್ಕೆ ದಾರಿಯಾಗುತ್ತೆ ಅಂತ ಅವಳು ಕೂಡ ಊಹಿಸಿರಲಿಲ್ಲ . ಅದು ಉರ್ಗ ಕೋಪಿಯಾದ ಕರ್ಣ ಪಿಶಾಚಿಯ ಶಕ್ತಿ!
 
ಸರ್ವನಾಶದ ಮೊದಲ ಬಲಿ ಸ್ವತಃ ಅರೀಫ್‌ ಬಾಬಾ. ತನ್ನ ಗುರುವನ್ನು ಬಲಪಡೆದು ಉಗ್ರವಾಗಿ ನಗಲಾರಂಭಿಸಿದಳು ಸುಬ್ಬಮ್ಮ . ಅಂದೆ ಸರ್ವನಾಶದ ಮುನ್ನುಡಿಯಾಗಿ ಆಕೆ ಪ್ರಶಾಂತಿನಿ ಮನೆಗೆ ಬರುತ್ತಾಳೆ..... ತನ್ನ ತಾಯಿಯ ಮನೆಗೆ ಎಂದು ನೆನೆಯುತ್ತಾ ಒಮ್ಮೆಲೆ ಗದ್ಗತಿತನಾಗುತ್ತಾನೆ .

   ಅಷ್ಟರಲ್ಲಗಲೇ ಹಿಮಾಂಶು ಮಲ್ಲೇಶರಂ 7ನೇ ಕ್ರಾಸ್‌ಗೆ ತಲುಪಿದ್ದ. ವೈಭವೊಪೇತ ಮೊಲ ಬಿಳುಪಿನ ಬಂಗಲೆ ನೋಡುತ್ತಿದಂತೆ ಆ ಶ್ರೀಮಂತಿಕೆ ಕಣ್ಣು ಕುಕ್ಕುತ್ತಿತ್ತು. ಬಂಗಲೇ ಮುಂದೆಯೆ ಸಾಲು ಸಾಲು ಕಾರುಗಳು ಆದರೆ ಅದ್ಯವುದನ್ನು ಗಮನಿಸಿರಲಿಲ್ಲ ಆತನ ಮನಸ್ಸು ಆ ಬಂಗಲೇಯ ಎರಡನೇ ಮಹಡಿಯ ಕೊಣೆಯತ್ತ ನೆಟ್ಟಿತ್ತು . ಅದು ಶಾಲಿನಿಯ ರೂಮ್‌ . ಅವನು ಬರುವುದು ಅವಳಿಗೆ ಹೇಗೆ ತಿಳಿಯಿತೊ ಗೊತ್ತಿಲ್ಲ ಒಮ್ಮೆಲೆ ಓಡಿ ಬಂದು ಹಿಮಾಂಶುವಿನ ಮುಂದೆ ಬಿಕ್ಕಿ ಬಿಕ್ಕಿ ಆತ್ತುಬಿಟ್ಟಳು ಶಾಲಿನಿ . ಅದು 96 ದಿನಗಳಿಂದ ಬಚ್ಚಿಟ್ಟಿದ್ದ ಕಣ್ಣಿರು. ನಲ್ಲಮಲ ಅರಣ್ಯದ ಆ ಕತ್ತಲ ರಾತ್ರಿಯಲ್ಲಿ ಅಂದು ಅವರಿಸಿದ ಮೌನ ಇಲ್ಲು ಅವರಿಸಿತು . ಅವರಿಬ್ಬರಲ್ಲೂ ಮಾತು ಹೊರಡಲಿಲ್ಲ . ನಿಶಬ್ಧವೇ ನಾಚುವಂತಹ ನಿಚ್ಚಳ ಮೌನ . ಅವರಿಬ್ಬರು ಅದೊಂದು ಮಾತು ಹೇಳದಿದ್ದರು ಇಬ್ಬರ ಮನಸ್ಸಿಗೂ ಅದು ತಿಳಿದೆ ಇತ್ತು . ಅರಣ್ಯದ ಆ ಕತ್ತಲ ರಾತ್ರಿಯಲ್ಲಿ ಬಚ್ಚಿಟ್ಟಿದ್ದ ಮಾತು ಅವರಿಸುತ್ತಾ ಬಂತು . ಅವರಿಬ್ಬರು ದೂರದಲ್ಲಿದ್ದರಿಂದ ಪ್ರೀತಿ ಸಾವಿರ ಪಟ್ಟು ಹೆಚ್ಚಗಿತ್ತು . ಆಗ ಮೊಳೆಯಿತು ಮಾತು .
 "ಹಿಮು , ನನ್ನೊಂದಿಗೆ ಜೀವನ ಪೂರ್ತಿ ಇರುತ್ತೀಯಾ???" ಎಂದು ಶಾಲಿನಿ ಕೇಳುತ್ತಿದ್ದಂತೆ ಸ್ತಂಭೀಭೂತನಾದ ಹಿಮಾಂಶು.
ಅಲ್ಲಿ ಕಾಲ ಸ್ತಬ್ದವಾಯಿತು!!

                                                   *  *  *  *

    ಮಾಟಗಾತಿ ಸುಬ್ಬಮ್ಮ ಅರೀಫ್‌ ಬಾಬಾನನ್ನು ಬಲಿ ಪಡೆದ ಮರುಕ್ಷಣ ಪುತ್ತೂರಿನ ಜಮ್ಮಿಯ ಮಸೀದಿಯಲ್ಲಿದ್ದ ಅರೀಫ್‌ ಬಾಬಾನ ಶಿಷ್ಯ ಎಚ್ಚೆತ್ತ. ಅವನಿಗೆ ಸಾವಿರರು ಕೀಲೊ ಮೀಟರ್‌ ದೂರದಿಂದಲೇ ಗುರುವಿನ ಮಾತು ಕೇಳಿಸಿತ್ತು . " ನಾಶ ಮಾಡು ಅವಳನ್ನ , ಇಲ್ಲದಿದ್ದರೆ ಸರ್ವನಾಶಕ್ಕೆ ಅಣಿಯಾಗುತ್ತಾಳೆ " ಆಗಲೇ  ಮಾಟಗಾತಿ ಬೆಂಗಳೂರಿನಲ್ಲಿ ಪೂಜೆ ಪ್ರಾರಂಭಿಸಿದ್ದು . ಆಗಲೇ " ಸರ್ವನಾಶ ಕಂಡು ಬರುತ್ತಿದೆ " ಎಂದು ಕರೀಂ ಬಾಬಾ ಎದ್ದು ಕೂಗಿದ್ದು .
ಮತ್ತು ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಹಿಮಾಂಶುವಿನ ತಾಯಿ ಪ್ರಶಾಂತಿನಿ ಹುಣ್ಣಿಮೆಯ ದಿನ ಮೊದಲ ಬಲಿ ಪಡೆದಿದ್ದು...

   ಹಿಮಾಂಶುವಿನ ತಾಯಿ ಪ್ರಶಾಂತಿನಿ ಬರ್ಬರ ಹತ್ಯಗೆ ರೂಪಿಸಿ ಬಿಟ್ಟಿದ್ದಳು ಮಾಟಗಾತಿ. ಟ್ರೇನ್‌ಗೆ ಹೊಕ್ಕವಳೇ ಮಧ್ಯವಯಸ್ಕ ಹೆಂಗಸಿನ ಗಂಟಲ ಭಾಗವನ್ನು ಕಿತ್ತು ಹೋಗಿದ್ದಳು ಅದು ಕರ್ಣ ಪಿಶಾಚಿಯಾ ಅರ್ಪಣೆಗೆ! . ಪ್ರಶಾಂತಿನಿಯ ಮೊದಲ Ruthlessness ಆರಂಭವಾಗಿದ್ದೆ ಅವಾಗ. ಆಗಲೇ ಕಾಲೇಜಿನಲ್ಲಿ  ಹಿಮಾಂಶು ನಿಗೂಢನಾಗಿದ್ದು . ತಾಯಿಯನ್ನು ಹುಣ್ಣಿಮೆಯ ದಿನ ನೋಡಿ ಬೆಚ್ಚಿಬಿದ್ದದ್ದು. ಭರ್ತಿ 16 ಕೊಲೆಗಳನ್ನು ಮಾಡಿದ್ದಳು ಪ್ರಶಾಂತಿನಿ.... And that is only because of black magic.. ಅದೆಲ್ಲ ಕಾಮಕರ್ಣ ಪಿಶಾಚಿನಿಗೆ ಎಂದು ನಂಬಿಸುತ್ತಾ ಬಂದಳು ಮಾಟಗಾತಿ ಸುಬ್ಬಮ್ಮ . 17ನೇ ಬಲಿ ಶಾಲಿನಿಯೆಂದು ತಿಳಿದಿದ್ದೆ ತಡ ಹಿಮಾಂಶು ತನ್ನ ಆಟ ಪ್ರಾರಂಭಿಸಿದ್ದ.
   " Himamshu played an intellectual game!"

  ಸ್ವತಃ ತಾನೇ ಕೊಲೆಗಾರನೆಂದು ಪೋಲಿಸರಿಗೆ ತಿಳಿಸಿ ಬಂಧನಕ್ಕೊಳಗಾಗುವಂತೆ ಮಾಡಿಕೊಳ್ಳುತ್ತಾನೆ . ಅದು ಶಾಲಿನಿಯನ್ನು ರಕ್ಷಿಸುವ ತಂತ್ರ ಎಂದು ಸ್ವತಃ ಮಾಟಗಾತಿಗೂ ತಿಳಿದಿರಲಿಲ್ಲ . ಹಿಮಾಂಶು ಶಾಲಿನಿಯನ್ನು ಉಳಿಸಿಕೊಳ್ಳಲು ಸ್ವತಃ ತಾನೇ ಜೈಲಿಗೆ ಹೋಗಿಬಿಟ್ಟಿದ್ದ .... ಹಿಮಾಂಶು ತನ್ನ ಪ್ಲಾನ್‌ನಲ್ಲಿ ಗೆಲುವು ಸಾಧಿಸಿದ್ದನಾ??????


 " ಹಿಮು, ನನ್ನ ಜೊತೆ ಜೀವನ ಪೂರ್ತಿ ಇರುತ್ತಿಯಾ?" ಶಾಲಿನಿ ತನ್ನ ಮೌನ ಮುರಿದು ಈ ಮಾತು ಹೇಳುತ್ತಿದಂತೆ ಸ್ತಂಭಿಭೂತನಾಗಿ , ಅಚ್ಚರಿಯಾಗಿ , ರೊಮಾಂಚನವಾಗಿ ಶಾಲಿನಿಯನ್ನು ನೋಡುತ್ತಾ ನಿಂತುಬಿಟ್ಟ.

    ಆಗ ರಾತ್ರಿ 10 ಗಂಟೆ!

    ಹುಣ್ಣಿಮೆಯ ಚಂದ್ರ ತನ್ನ ಸೌಂದರ್ಯವನ್ನು ಕೇವಲ ಮಲ್ಲೇಶರಂನ 7ನೇ ಕ್ರಾಸ್‌ನ ಆ ಮನೆಯ ಮೇಲೆಯೆ ಬೀರುತ್ತಿದ್ದನೆನೋ ಎಂದು ಭಾಸವಾಗುತ್ತಿತ್ತು. ಅದು ಡಿಸೆಂಬರ್‌ನ ಆರಂಭದ ದಿನಗಳು ಚಳಿ ಮೈ ಕೊರೆಸುತ್ತಿತ್ತು . ಬೆಳಗ್ಗೆಯಿಂದ ಗಿಜಿಗುಡುತ್ತಿದ್ದ ಮಲ್ಲೇಶರಂನ ರಸ್ತೆಗಳು ಶಾಂತವಾಗಿತ್ತು , ಸಂಪಿಗೆ ಹೂವಿನ ಘಮ ಮುಗಿಗೆ ನಾಟುತ್ತಿತ್ತು , ಅಲ್ಲಿ ಶಾಲಿನಿ-ಹಿಮುವಿನ ನಡುವೆ ಮೌನ ಮಾತಡಿತ್ತು , ತನ್ನ ನಗುವಿನಲ್ಲೆ ,ಕಣ್ಣಲ್ಲೆ ಒಪ್ಪಿಗೆ ಸೂಚಿಸಿದ್ದ ಹಿಮಾಂಶು.

   ಆಗ ಶಾಲಿನಿಗೆ ನೆನಪುಗಳ ಸೊನೆಮಳೆ ಬಂದಂತ್ತಿತ್ತು . ಸೇಂಟ್‌ ಡೇವಿಡ್‌ ಕಾಲೇಜಿನಲ್ಲಿ ಮೃದುವಾದ ಕಣ್ಣುಗಳಲ್ಲಿ ಆಸೆಯನ್ನು ಹೊತ್ತು ಬಂದಿದ್ದ ಹಿಮಾಂಶು ನೆನಪಾದ , " can you mind your own work " ಅಂತ ರೇಗಿದ್ದ ಹಿಮಾಂಶು ನೆನಪಾದ, ಸ್ಯಾಂಕಿ ರಸ್ತೆಯ ಬದಿಯಲ್ಲಿ ಕಾಫಿ ಕೊಡಿಸಿದ್ದ ಹಿಮು ನೆನಪಾದ , ನಲ್ಲಮಲ ಅರಣ್ಯದ ಅ ಕತ್ತಲಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ ಪ್ರೀತಿಯ ಹಿಮು ನೆನಪಾಗಿಬಿಟ್ಟ . ಶಾಲಿನಿಯ ಮನಸ್ಸು ಒಮ್ಮೆಲೆ ತುಂಬಿ ಬಂದಿತ್ತು . 96 ದಿನಗಳಿಂದ ನೋಡದೆ ಅವನನ್ನು ಪ್ರೀತಿಸಿದ ಹಿಮಾಂಶು ಪಕ್ಕದಲ್ಲಿದ್ದಾನೆ . ಅವಳ ಕಣ್ಣುಗಳಲ್ಲಿ ಪ್ರೀತಿ ಬೆರೆತ ಆಶರ್ಯ!!

   ಶಾಂತವಾದ ಆ ರಸ್ತೆಯಲ್ಲಿ ಮೌನ ಮಾತಾಗಿ , ಮಾತು ಪ್ರೀತಿಯಾಗಿ ಹಿಮಾಂಶುವಿನ ಹೆಗಲ ಮೇಲೆ ತನ್ನ ತಲೆಯಿಟ್ಟು  ಶಾಲಿನಿ ಕನಸ್ಸಿನ ಕೋಟೆ ಕಟ್ಟತ್ತ ಅವರಿಬ್ಬರು ನಡೆಯುತ್ತಾ ನಡೆಯುತ್ತಾ ಕನಸ್ಸಿನ ಕೋಟೆಯೊಳಗೆ ಕಣ್ಮರೆಯಾಗಿ ಬಿಟ್ಟರು.
   ಕಾಲ ಸ್ತಬ್ಧವಾಯ್ತು!! ಹುಣ್ಣಿಮೆಯಲ್ಲಿ ನಿಶಬ್ಧ ಅವರಿಸಿತು.....

                                        ******************************

  ಸುಬ್ಬಮ್ಮನೆಂಬ ಅತಿ ಕ್ರೂರ ಮಾಟಗಾತಿ ತನ್ನ ಶಕ್ತಿ , ಸಾಧನೆಯಾದ ಕಾಮಕರ್ಣ ಪಿಶಾಚಿಯನ್ನು ಬಳಸಿ ಸರ್ವನಾಶಕ್ಕೆ ಅಣಿಯಾಗಿ , ಆಲ್ಗೆಜಂಡರ್‌ ರಾಜನಾಥ ಚಟರ್ಜಿ ನಾಶಕ್ಕೆ ನಿಂತಾಗ ಕರ್ಣ ಪಿಶಾಚಿ ಕೋಪಗೊಂಡಿದ್ದಳು . ಅದು ಕರ್ಣ ಪಿಶಾಚಿಯ ಸಾಧನೆಯ ವಿರುದ್ಧದ ಬಳಕೆ . ಬೆಂಗಳೂರು ತಲಘಟ್ಟಪುರದ ಸ್ಮಶಾನದಲ್ಲಿ ಮಾಟಗಾತಿ ಪೂಜೆ ಆರಂಭಿಸಿದರೆ ಪ್ರಶಾಂತಿನಿ ಅದೆಲ್ಲೊ ದೂರದಲ್ಲಿ ಕೊಲೆ ಮಾಡುವ ಹೊತ್ತಿಗೆ ಕರ್ಣ ಪಿಶಾವಿನಿ ತಿರುಗಿ ಬಿಳುತ್ತಾ ಬಂದಳು ಅದರ ಜೊತೆಗೆ ಕರೀಂ ಬಾಬಾ ಎಂಬ ಮುಸ್ಲಿಂ ಮಾಂತ್ರಿಕ ಸೇಡಿಗಾಗಿ ಆತೊರೆದ . ಸುಬ್ಬಮ್ಮ ಯಾರದೋ ಸರ್ವನಾಶಕ್ಕೆ ನಿಂತವಾಳು ಅವಳ ಸರ್ವನಾಶಕ್ಕೆ ಬೇರೊಬ್ಬರು ನಿಂತಿದಿದ್ದಾರೆಂನುದು ಮರೆತೆ ಬಿಟ್ಟಳು . 8ನೇ ವಾರದಲ್ಲಿ ಸುಬ್ಬಮ್ಮನ ಅಷ್ಟು ಬಲವು ಉದುಗಿ ಹೋಗಿತ್ತಿತ್ತು.
                                                               *  * *
  
    ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌  ತನ್ನ ಇಂಜಿನ್‌ ಆನ್‌ ಮಾಡಿಕೊಂಡು ಡಿಸೇಂಬರ್‌ನ ಚಳಿಯಲ್ಲಿ ಸಾಧಾರಣ ಎನ್ನಿಸುವಷ್ಟು ಪ್ರಯಾಣಿಕರನ್ನು ಬೆಂಗಳೂರಿನಿಂದ ಹೊತ್ತೊಯ್ತಿತ್ತು . ಆ ಕೊಲೆಗಳ ಭಯ ಇನ್ನ ಪೋಲಿಸರಿಗೆ ಹಾಗೇಯೆ ಇತ್ತು , ಬೋಗಿ ಬೋಗಿಯಲ್ಲು ಪೋಲಿಸರ ಸದ್ದು , ಹುಣ್ಣಿಮೆಯೆ ದಿನವದು ಟ್ರೇನ್‌‌ ಬೆಂಗಳೂರು ಅಂಧ್ರ ದಾಟಿ ಒಡಿಶಾದ ಭುಭನೇಶ್ವರ ತಲುಪಿತ್ತು . ಕಪ್ಪು ಸುಂದರಿ ಮತ್ತೆ ಮತ್ತೆ ತನ್ನ ಸೌಂದರ್ಯ ಸೂಚಿಸುತ್ತಿದ್ದಳು. ಹುಣ್ಣಿಮೆಯ ರಾತದರಿಯಲ್ಲಿ ಕರ್ಬೊಗೆಯು ಆಕಾಶಕ್ಕೆ ಸೇರುವ ಅ  ಕಪ್ಪು ಬಿಳುಪು ಆಟ ಮನಮೋಹಕವಾಗುತ್ತಿತ್ತು . 16 ಭರ್ಬರ ಹತ್ಯೆ ಕಂಡಿದ್ದ ಪ್ರಶಾಂತಿ ಎಕ್ಸ್‌ಪ್ರೇಸ್‌ ಭರ್ತಿ 3 ತಿಂಗಳ ನಂತರ ಶಾಂತವಾಗುತ್ತಾ ಬಂತು . ಅಷ್ಟು ಹತ್ಯೆಗಳನ್ನು ಮರೆತು ತನ್ನ ದೈನಿಕ ಓಡಾಟ ಪ್ರಾರಂಭಿಸಿತ್ತು ಕರ್ನಾಟಕ-ಅಂಧ್ರದ ಜೀವನಾಡಿ ಪ್ರಶಾಂತಿ ಎಕ್ಸ್‌ಪ್ರೇಸ್‌.
  ಪ್ರಶಾಂತಿ  ಎಕ್ಸ್‌ಪ್ರೇಸ್‌‌‌ನಲ್ಲಿ ಹಿಂದಿನ ಪ್ರಶಾಂತತೆ ಕಾಣಿಸಿತ್ತು !ಹುಣ್ಣಿಮೆಯಲ್ಲಿ ನಿಶಬ್ಧ ಅವರಿಸಿತ್ತು......

                                                               *****************


    ಸುಬ್ಬಮ್ಮ ತನ್ನ ಮೊದಲ ಪೂಜೆ ಆರಂಭಿಸಿದ ದಿನದಿಂದಲೇ ಗೆಲುವು ಸಾಧಿಸುತ್ತಾ ಹೋದಳು , ಅದು ಸ್ವತಃ ಕರ್ಣ ಪಿಶಾಚಿಯನ್ನು ಬಳಸಿ ಪಡೆಯುತ್ತಿದ್ದ ಗೆಲುವು .ಕರ್ಣ ಪಿಶಾಚಿಗೆ ಅಷ್ಟು ವಾರಗಳು ನೆತ್ತರು ಅರ್ಪಿಸಿ ತಣಿಸಿದ್ದಳು ಅದರೂ ಕರ್ಣ ಪಿಶಾಚಿಯ ಉಗ್ರರೂಪ ತಣಿಸಲಾಗಲಿಲ್ಲ ಅವಳಿಗೆ, ಜೊತೆಗೆ ಕರೀಂ ಬಾಬಾನ ಶಕ್ತಿ , ಮುಸ್ಲಿಂ ವಾಮಾಚಾರ ಲೋಕವೇ ಹಾಗೆ ಅದು ತಕ್ಷಣ ತನ್ನ ಕಾರ್ಯ ಶುರುಮಾಡದೆಯಿದ್ದರು . ಭರ್ತಿ ತನ್ನೆಲ್ಲ ಶಕ್ತಿಯನ್ನು ತೋರಿಸಲು ಹಪಹಪಿಸುತ್ತದೆ . ಕೇವಲ ಎಂಟೊಂಬತ್ತು ವಾರದಲ್ಲಿ ಮಾಟಗಾತಿ ಸುಬ್ಬಮ್ಮ 16 ಬಲಿ ಪಡೆದು ಬೀಗುತ್ತಿದ್ದಳು . ಆಗಲೇ ನೋಡಿ ಕರೀಂ ಬಾಬಾ ಹಿಮಾಂಶುವಿನ ನೆರವು ಪಡೆದಿದ್ದು . ಹಿಮು ಅರೆಷ್ಟ್‌ ಆಗಿ , 17ನೇ ಬಲಿಯಾಗಲು ಅವಕಾಶ ನೀಡದೆ ಇದ್ದದ್ದು . ಅದು ಹುಣ್ಣಿಮೆಯ ದಿನ ಕರ್ಣ ಪಿಶಾಚಿಗೆ ಒಂದು ಬಲಿ ಅರ್ಪಿಸಿಲ್ಲವೆಂದರೆ ಉಗ್ರರೂಪಿಯಾಗಿ ತನ್ನೆನ್ನೆ ಬಲಿ ಪಡೆಯುತ್ತಾಳೆ ಎಂದು ಗೊತ್ತಾಗುತ್ತೆ . ಮುಸ್ಲಿಂ ಮಾಂತ್ರಿಕ ಕರೀಂ ಬಾಬಾ ಪುತ್ತೂರಿನಿಂದಲೇ ತನ್ನ ಪೂಜೆ ಆರಂಭಿಸಿದ್ದ . ಮೆಲ್ಲನೆ ಧ್ವನಿಯಲ್ಲಿ ಆರಂಭವಾಗಿದ್ದ ಈ ಸಾಲು ಮುಗಿಯುವಷ್ಟರಲ್ಲಿ ಕಿವಿ ಹೊಡೆದು ಹೋಗುವಷ್ಟು ಜೋರಾಗುತ್ತಿತ್ತು .

   "ಯೋಮಾಯುನ್‌ ಪಿಕ್ಕ್‌ ಫಿಸೂರಿ ಪತುತೂನಾ ಆಫ್‌ ವಾಜಾ!"

  " ಈ ದಿನವೂ ಶಂಕವು ಊದಲಾಗುತ್ತದೆ . ಆಕಾಶ ತೆರೆಯಲ್ಪಡುತ್ತದೆ , ಆಗ ಶವಗಳು ಗುಂಪು ಗುಂಪಾಗಿ ಎದ್ದು ಬರುತ್ತವೆ "

   ತಾನು ಸಾದಿಸಿದ್ದ ಕರ್ಣ ಪಿಶಾಚಿಯಿಂದಲೇ ಸುಬ್ಬಮ್ಮನ ಅಂತಿಮದ ಆರಂಭವಾಗಿತ್ತು . 16 ಶವಗಳು ಗುಂಪು ಗುಂಪಾಗಿ ಎದ್ದು ಬಂದು ಸುಬ್ಬಮ್ಮನೆಂಬ ಅತಿಕ್ರೂರ ಮಾಟಗಾತಿಯನ್ನು ಅಷ್ಟೆ ಕ್ರೂರವಾಗಿ ಬಲಿ ಪಡೆದುಬಿಟ್ಟವು.

  ಕಾಲ ಸ್ತಬ್ಧವಾಯ್ತು!! ಹುಣ್ಣಿಮೆಯಲ್ಲಿ  ನಿಶಬ್ಧ ಅವರಿಸಿಕೊಳ್ಳುತ್ತಾಲೆ ಅದೆಲ್ಲೊ  ದೂರದ ಪುತ್ತೂರಿನ ಜಮೀಯ ಮಸೀದಿಯ ಪಕ್ಕದಲ್ಲಿದ್ದ ಶವ ಕಂಪಿಸಿದಂತಾಯ್ತು. ಮಲ್ಲೇಶರಂ ಏಳನೇ ಕ್ರಾಸ್‌ನ ಬೀದಿಯ ತಿರುವಿನಲ್ಲಿ ಪ್ರಶಾಂತಿನಿ ಕಾಣಿಸಿಕೊಳ್ಳುತ್ತಾಳೆ . ಅದನ್ನು ಗಮನಿಸಿದ ಕರೀಂ ಬಾಬಾ ಬೆಚ್ಚಿಬಿದ್ದ .
ಅಲ್ಲಿಂದ ಆರಂಭವಾದದ್ದೆ ಮತ್ತೊಂದು ಕಥೆ

"ಹುಣ್ಣಿಮೆಯ ರಹಸ್ಯ!"

No comments:

Post a Comment